ಬೆಂಗಳೂರು: ಬಿಗ್ಬಾಸ್’ನಲ್ಲಿ ರವಿವಾರ ಸಂಜೆ ‘ಸೂಪರ್ ಸಂಡೇ ವಿತ್ ಸುದೀಪ್’ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಒಂದು ವಿಶೇಷ ಪ್ರಸಂಗ ನಡೆಯಿತು.
ಈ ವಾರದ ‘ಸೂಪರ್ ಸಂಡೇ ವಿತ್ ಸುದೀಪ್’ ಎಪಿಸೋಡಿನಲ್ಲಿ ಬಿಗ್ಬಾಸ್ ಸ್ಪರ್ಧಿಗಳ ಪಾಲಕರ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮನೆಯೊಳಗಿರುವ ಸ್ಪರ್ಧಿಗಳ ಮನೆಯಿಂದ ಒಬ್ಬೊಬ್ಬರು ಹಾಜರಾಗಿದ್ದರು. ಇದರ ಜತೆಗೆ ಈ ವಾರ ಬಿಗ್ಬಾಸ್ ಮನೆಗೆ ಹೋಗಿದ್ದ ಕಿರಿಕ್ ಕೀರ್ತಿ, ಶಾಲಿನಿ, ಶೀತಲ್ ಶೆಟ್ಟಿ ಹಾಗೂ ನಿರಂಜನ್ ದೇಶಪಾಂಡೆಯವರು ವೇದಿಕೆಯಲ್ಲಿ ಹಾಜರಾಗಿದ್ದರು.
ಮನೆಯಲ್ಲಿದ್ದ ಸ್ಪರ್ಧಿಗಳ ಕುರಿತು ಅವರ ಪೋಷಕರಿಗೆ ತಿಳಿಹೇಳುವ ಸಲುವಾಗಿ ಈ ಸಭೆ ನಡೆಸಲಾಗಿತ್ತು. ಮೊದಲಿಗೆ ಸ್ಪರ್ಧಿಗಳ ಬಗ್ಗೆ ಕಿರಿಕ್ ಕೀರ್ತಿಯವರು ಅಭಿಪ್ರಾಯ ಹಂಚಿಕೊಳ್ಳಲು ಮುಂದಾದರು. ಈ ವೇಳೆ ತಮ್ಮ ಮಗಳ ಕುರಿತು ಫೇಸ್ಬುಕ್ನಲ್ಲಿ ಪ್ರಸ್ತಾಪ ಮಾಡದೇ ಇರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅನುಪಮಾ ಅವರ ತಾಯಿ. ಅಭಿಪ್ರಾಯ ಹಂಚಿಕೆಯ ಉದ್ದೇಶದಿಂದ ಕರೆಯಲಾಗಿದ್ದ ಸಭೆಯಲ್ಲಿ ಜಗಳವಾಗುವ ಮುನ್ಸೂಚನೆ ತೋರಿತು.
ಅನುಪಮಾ ಅವರ ತಾಯಿಯ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿದ್ದರು ಕಿರಿಕ್ ಕೀರ್ತಿ. ಕೀರ್ತಿ ಈ ವೇಳೆ ಸಮಾಜಾಯಿಷಿ ನೀಡಲು ಮುಂದಾದರು ಅನುಪಮಾ ತಾಯಿ ತನ್ನ ಪಟ್ಟನ್ನು ಬಿಡಲಿಲ್ಲ.
ಈ ಜಗಳ ದೊಡ್ಡಮಟ್ಟಕ್ಕೇ ಹೋಗಬಹುದು ಎನ್ನುವುದನ್ನು ಅರಿತ ನಿರೂಪಕ ಸುದೀಪ್ ಅವರು ಮಧ್ಯೆ ಪ್ರವೇಶಿಸಿ, ಅನುಪಮಾ ತಾಯಿ ಅವರಿಗೇ ತಿಳಿ ಹೇಳಿ, ಇದು ಕೇವಲ ಅಭಿಪ್ರಾಯವಷ್ಟೇ ಜಗಳವಾಡಬೇಡಿ ಎಂದು ಸೂಚಿಸಿದರು.
Comments are closed.