ಮನೋರಂಜನೆ

ಬಿಗ್‌ಬಾಸ್‌ನಲ್ಲಿ ಸೇಫ್ ಆಟಗಾರ ಯಾರು…? ವೀಕ್ಷಕರ ಆರೋಪವೇನು..? ನಿಮಗೆ ಏನು ಅನಿಸುತ್ತೆ..?

Pinterest LinkedIn Tumblr

ಬಿಗ್‌ಬಾಸ್‌5 ನೇ ಸಿಸನ್‌ನಲ್ಲಿ ದಿನದಿಂದ ದಿನಕ್ಕೆ ಗಲಾಟೆ, ಗದ್ದಲ ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ ಯಾವುದೇ ರೀತಿಯ ಗೊಂದಲಕ್ಕೂ ಸಿಗದೇ, ಯಾರಿಗೆ ವಿರೋಧಿಯು ಆಗದೆ ಸೇಫ್ ಆಗಿ ಆಟ ಆಡುತ್ತಿರುವವರು ಯಾರು ಎಂಬ ಪ್ರಶ್ನೆ ಎದ್ದರೆ ….ಚಂದನ್ ಶೆಟ್ಟಿಯತ್ತ ವೀಕ್ಷಕರು ಬೊಟ್ಟು ಮಾಡುವಂತಾಗಿದೆ.

ಬಿಗ್‌ಬಾಸ್‌ಆರಂಭದಿಂದ ಮನೆಯಲ್ಲಿ ಪ್ರತಿ ದಿನ ಒಂದಲ್ಲ ಒಂದು ಗೊಂದಲ, ಕಿರಿಕಿರಿ ಗಲಾಟೆ, ಕೂಗಾಟ, ಚೀರಾಟ ನಡೆಯುತ್ತಿದ್ದರೂ ಇದೆಲ್ಲವನ್ನು ದೂರದಿಂದಲೇ ನೋಡುವ ಮೂಲಕ ಚಂದನ್ ಶೆಟ್ಟಿ ಸೇಫ್ ಆಟ ಆಡುತ್ತಿದ್ದಾರೆ ಎಂಬ ಅನುಮಾನ ಹಿಂದಿನಿಂದಲೂ ವೀಕ್ಷಕರನ್ನು ಕಾಡುತ್ತಿದೆ.

ಇದನ್ನು ಪುಷ್ಟಿಕರಿಸುವಂತೆ ಕಿಚ್ಚ ಸುದೀಪ್ ಕೂಡ ಈ ಹಿಂದೆ ಚಂದನ್ ಸೇಫ್ ಗೇಮ್ ಬಗ್ಗೆ ಮಾತನಾಡಿದ್ದರು.

ಇತ್ತೀಚಿಗೆ ರಿಯಾಜ್ ತೆಕ್ಕೆಯಿಂದ ಜಾರಿಕೊಂಡಿರುವ ದಿವಾಕರ್ ಈಗ ಚಂದನ್ ಜೊತೆ ಗೆಳೆತನದಲ್ಲಿದ್ದಾರೆ. ಆದರೆ ರಿಯಾಜ್ ಅವರು ದಿವಾಕರ್ ತಪ್ಪು ಮಾಡಿದಾಗ ಸರಿ ದಾರಿಯನ್ನು ತೋರಿಸುತ್ತಿದ್ದರು. ಆದರೆ ಚಂದನ್ ಮಾತ್ರ ಗೆಳೆಯ ಎಂದು ಹೇಳುತ್ತಾರೆಯೇ ವಿನಹ ತಪ್ಪನ್ನು ತಿದ್ದಿಕೊಳ್ಳಲು ಸಲಹೆಯನ್ನು ನೀಡದೆ ಕೇವಲ ತನ್ನ ಸೇಫ್’ಗಾಗಿ ದಿವಾಕರನ್ನು ಬಳಸಿಕೊಳ್ಳುತ್ತಾರೆ ಎಂಬುದು ವೀಕ್ಷಕರ ಆರೋಪ.

‘ದಿವಾಕರ್ ಜೊತೆ ಚೆನ್ನಾಗಿದ್ದರೆ ಜನರ ಅನುಕಂಪ ಪಡೆಯಬಹುದು ಎಂಬ ಲೆಕ್ಕಾಚಾರ ಚಂದನ್ ಅವರಲ್ಲಿದೆ. ದಿವಾಕರ್ ಜೊತೆ ಶುಕ್ರವಾರ ಜಗನ್ ಹಾಗು ಚಂದ್ರು ಅವರು ದೊಡ್ಡದಾಗಿ ಗಲಾಟೆ ಮಾಡಿದರು. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋದರೂ ಅಲ್ಲೇ ಇದ್ದ ಚಂದನ್ ಮಾತ್ರ ಕುಳಿತಲ್ಲಿಂದ ಮೇಲೆ ಏಳಲೇ ಇಲ್ಲ. ಇದು ಅವರ ಸೇಫ್ ಗೇಮನ್ನು ತೋರಿಸುತ್ತಿದೆ’ ಎಂಬುದು ವೀಕ್ಷಕರ ದೂರು.

ಇತ್ತೀಚಿಗೆ ಕಾಮನ್ ಮ್ಯಾನ್ ಗುಂಪಿನಲ್ಲಿದ್ದ ರಿಯಾಜ್, ದಿವಾಕರ್, ಚಂದನ್ ಶೆಟ್ಟಿ, ಸಮೀರ್ ಆಚಾರ್ಯ, ಜಯ ಶ್ರೀನಿವಾಸನ್, ನಿವೇದಿತಾ ಗೌಡ ಬೇರೆ ಬೇರೆ ಆಗಿದ್ದಾರೆ. ರಿಯಾಜ್ ಹಾಗು ಸಮೀರ್ ಆಚಾರ್ಯ ಒಂದಾಗಿದ್ದರೆ, ಇತ್ತ ದಿವಾಕರ್ ಅವರು ಚಂದನ್ ಶೆಟ್ಟಿ ಜೊತೆ ಸೇರಿಕೊಂಡಿದ್ದಾರೆ.

ಜೊತೆಯಾಗಿಯೇ ಇದ್ದ ರಿಯಾಜ್ ಅವರನ್ನು ಈ ವಾರ ಚಂದನ್ ಶೆಟ್ಟಿ ನಾಮಿನೇಟ್ ಮಾಡಿದ್ದು, ಚಂದನ್ ಶೆಟ್ಟಿ ಅವರ ಆಟದ ವೈಖರಿ ಬಗ್ಗೆ ವೀಕ್ಷಕರಲ್ಲಿ ಅನುಮಾನ ಹುಟ್ಟುವಂತೆ ಮಾಡಿದೆ.

ಇನ್ನೊಂದೆಡೆ ಜೆಕೆ ಕೂಡ ಸೇಫ್ ಆಟವನ್ನು ಆಡುತ್ತಾನೆ ಬರುತ್ತಿದ್ದಾರೆ. ಯಾವುದೇ ರೀತಿಯ ಪ್ರಶ್ನೆಗೂ ನಿಲುಕದೆ ತನ್ನ ಆಟವನ್ನು ಸೇಫ್ ಆಗಿಯೇ ಆಡುತ್ತಿದ್ದಾರೆ.

Comments are closed.