ನವದೆಹಲಿ: ಪದ್ಮಾವತಿ ಚಿತ್ರಕ್ಕೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನ.24 ರಂದು ವಜಾಗೊಳಿಸಿದ್ದು ಇಂತಹ ಅರ್ಜಿಗಳು ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಉತ್ತೇಜಿಸುತ್ತವೆ ಎಂದು ಹೇಳಿದೆ.
ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆಯೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ ಒಂದು ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಬೇಕೆಂದು ಕೋರಿದ್ದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ಸಿ. ಹರಿ ಶಂಕರ್ ಹತಾಶ ಮತ್ತು ತಪ್ಪಾಗಿ ಅರ್ಥೈಸಲಾಗಿರುವ ಅರ್ಜಿಯೆಂದು ಹೇಳಿದೆ.
ನೀವು ಸಿನಿಮಾವನ್ನು ವೀಕ್ಷಿಸಿದ್ದೀರಾ? ಸಿನಿಮಾ ಹಾಲ್ ಗಳನ್ನು ಸುಡಲು ಯತ್ನಿಸುತ್ತಿರುವವರು ಚಿತ್ರವನ್ನು ವೀಕ್ಷಿಸಿದ್ದರೆಯೇ? ಇಂತಹ ಅರ್ಜಿಗಳ ಮೂಲಕ ನೀವು ಪ್ರತಿಭಟನೆಗಳನ್ನು ಉತ್ತೇಜಿಸುತ್ತಿದ್ದೀರಿ ಎಂದು ಹೈಕೋರ್ಟ್ ಅರ್ಜಿದಾರರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಕೋರ್ಟ್ ಗೆ ಬರುವ ಬದಲು ಸಿನಿಮಾ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಕೋರ್ಟ್ ಸೂಚನೆ ನೀಡಿದೆ.
Comments are closed.