ಮನೋರಂಜನೆ

ಬಿಗ್‌ಬಾಸ್‌ ಮನೆಯ ಆಶಿತಾ-ಚಂದ್ರು ಬಗ್ಗೆ ಕೃಷಿ ಬಿಚ್ಚಿಟ್ಟ ಸತ್ಯವೇನು…?

Pinterest LinkedIn Tumblr

ಬಿಗ್ ಬಾಸ್ ಕನ್ನಡ-5′ ಕಾರ್ಯಕ್ರಮದ ಐದನೇ ವಾರ ನಟಿ ಕೃಷಿ ತಾಪಂಡ ಔಟ್ ಆದರು. ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟ ಮೊದಲ ದಿನದಿಂದಲೂ, ನಟಿ ಕೃಷಿ ತಾಪಂಡ ಸೆಲೆಬ್ರಿಟಿ ಸ್ಪರ್ಧಿಗಳ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಭಾನುವಾರ ನಡೆದ ಸೂಪರ್‌ ಸಂಡೇ ವಿತ್‌ ಕಿಚ್ಚ ಸುದೀಪ್‌ ಎಪಿಸೋಡಿಯಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ನಡೆಯುತ್ತಿರುವ ಆಸಕ್ತಿದಾಯಕ ಕೆಲ ವಿಚಾರಗಳು ಬಹಿರಂಗಗೊಂಡವು.

ಬಿಗ್‌ಬಾಸ್‌ ಮನೆಯಿಂದ 5 ನೇ ವಾರಕ್ಕೆ ಹೊರಬಂದಿರುವ ಕೃಷಿತಾ ಅವರು ಬಿಗ್‌ಬಾಸ್‌‌ ಮನೆಯಲ್ಲಿಯ ಕೆಲ ಪರ್ಸನಲ್ ವಿಚಾರಗಳನ್ನು ಬಿಚ್ಚಿಟ್ರು. ನಿನ್ನೆಯ ಬಿಗ್‌ಬಾಸ್‌ ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್‌ ಅವರು, ಕೃಷಿ ಅವರ ಜತೆ ಮಾತುಕಥೆ ನಡೆಸಿದ್ರು. ಪ್ರಾರಂಭದಲ್ಲಿ ಕೃಷಿ ಬಿಗ್‌ಬಾಸ್‌ ಮನೆಯಲ್ಲಿ ಕಳೆದ 4 ವಾರಗಳ ಕುರಿತು ಮೆಲುಕು ಹಾಕಲಾಯಿತು.

ಬಳಿಕ ಬಿಗ್‌ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳ ಫೋಟೋಗಳನ್ನು ತೋರಿಸಿ ಕೃಷಿ ಅವರ ಅಭಿಪ್ರಾಯಗಳನ್ನು ಪಡೆದುಕೊಂಡ್ರು ಸುದೀಪ್‌. ಈ ವೇಳೆ ಆಶಿತಾ ಕುರಿತು ಇಂಟ್ರೆಸ್ಟಿಂಗ್‌ ವಿಷ್ಯ ಹಂಚಿಕೊಂಡ ಕೃಷಿ, ಆಶಿತಾ ಅವರು ಎಲ್ಲರಿಗಿಂತ ಸ್ವೀಟ್‌. ಉತ್ತಮ ಹೃದಯವಂತಳು, ಗುಣವಂತಳು. ಎಲ್ಲರ ಜತೆ ಚೆನ್ನಾಗಿ ಇರ್ತಾರೆ. ಆದರೆ, ಇತ್ತೀಚಿಗೆ ಜಗನ್‌ ಕಡೆ ಜಾಸ್ತಿ ಗಮನ ಹರಿಸುತ್ತಿದ್ದಾರೆ. ದಿನದ 24 ಗಂಟೆಗಳ ಕಾಲ ಅವನ ಬಗ್ಗೆ ಯೋಚನೆ ಮಾಡ್ತಾಳೆ, ಮನೆಯಲ್ಲಿ ಏನು ನಡೆಯುತ್ತಿದೆ ಎನ್ನುವ ಪರಿವು ಅವಳಿಗೆ ಇರುವುದಿಲ್ಲ. ಜಾಸ್ತಿ ಹೊತ್ತು ಅವನ ಜತೆ ಮಾತಾಡ್ತಾಳೆ. ಅದೇನು ಮಾತಾಡ್ತಾಳೆ ಎನ್ನುವ ವಿಚಾರ ಮನೆಯಲ್ಲಿರುವ ಯಾರಿಗು ಇದುವರೆಗೂ ಗೊತ್ತಾಗಿಲ್ಲ. ಮನೆಯಲ್ಲಿರುವ ಇತರ ಸದಸ್ಯರು ಇವರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ರು ಕೃಷಿ.

ಇನ್ನು ಸಿಹಿಕಹಿ ಚಂದ್ರು ಅವರ ಬಗ್ಗೆ ಮಾತನಾಡಿದ ಅವರು, ತುಂಬಾ ಕ್ರಿಮಿನಲ್ ಆಗಿ ಆಟವಾಡುತ್ತಿದ್ದಾರೆ. ತಮ್ಮ ಹೆಸರಿಗೆ ಕಪ್ಪು ಚುಕ್ಕಿ ಬರದ ಹಾಗೆ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ ಕೃಷಿ, ಮನೆಯಲ್ಲಿ ನಡೆದ ಹಾಲಿನ ವಿಚಾರವನ್ನು ವೇದಿಕೆಯಲ್ಲಿ ಹಂಚಿಕೊಂಡ್ರು. ಬಿಗ್‌ಬಾಸ್‌ ಮನೆಯಲ್ಲಿ ಹಾಲು ಬಂದಾಗ ಅದನ್ನು ಬಚ್ಚಿಡುವ ವೇಳೆ ಚಂದ್ರು ಅವರು ಇದ್ದರಂತೆ. ಆದರೆ, ಅದು ದೊಡ್ಡ ರಾದ್ಧಾಂತ ಆಗುವ ಮುನ್ಸೂಚನೆ ಸಿಕ್ಕಾಗ ಅದರಿಂದ ನಾಜೂಕಾಗಿ ಹೊರಬಂದರು. ಕೊನೆಗೆ ಅದು ನಮ್ಮ ಮೇಲೆನೇ ಬಂತು ಎಂದು ಹೇಳಿದ್ರು ಕೃಷಿ.

Comments are closed.