ಕನ್ನಡದ ಬಿಗ್ಬಾಸ್ ಸೀಸನ್-5 ಒಟ್ಟು 4 ವಾರಗಳನ್ನು ಯಶಸ್ವಿಯಾಗಿ ಪೂರೈಸಿ 5ನೇ ವಾರಕ್ಕೆ ಕಾಲಿಟ್ಟಿದೆ. ಮನೆಯಲ್ಲಿರುವ ಯಾವ ಸ್ಫರ್ಧಿ ಬಿಗ್ಬಾಸ್ ನೀಡುವ 50 ಲಕ್ಷವನ್ನು ಬಹುಮಾನವಾಗಿ ಪಡೆದುಕೊಳ್ಳುತ್ತಾರೆ ಎಂಬ ಲೆಕ್ಕಾಚಾರ ಎಲ್ಲೆಡೆ ಜೋರಾಗಿದೆ.
ಅದೇ ರೀತಿ ನಾಲ್ಕನೇ ವಾರಕ್ಕೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಬಂದ ತೇಜಸ್ವಿನಿ ಒಂದಷ್ಟು ಕುತೂಹಲಕಾರಿ ವಿಷಯಗಳನ್ನು ಕಿಚ್ಚ ಸುದೀಪ್ ಮುಂದೆ ಬಿಚ್ಚಿಟ್ಟಿದ್ದಾರೆ. ‘ನಿಮ್ಮ ಪ್ರಕಾರ ಈ ಸೀಸನ್ನ ಫಿನಾಲೆಗೆ ಯಾವ 5 ಸ್ಫರ್ಧಿಗಳು ಬರಬಹುದು?’ ಎಂಬ ಪ್ರಶ್ನೆಯನ್ನು ಕಿಚ್ಚ ಸುದೀಪ್ ತೇಜುಗೆ ಕೇಳಿದರು.
ಕಿಚ್ಚನ ಪ್ರಶ್ನೆಗೆ ಉತ್ತರಿಸಿದ ತೇಜು, ‘ಚಂದನ್, ಜೆಕೆ, ಚಂದ್ರು, ಅನುಪಮಾ ಮತ್ತು ದಿವಾಕರ್’ ಹೆಸರನ್ನು ಹೇಳಿದರು. ಅಂತಿಮವಾಗಿ ಯಾವ ಇಬ್ಬರು ಸ್ಫರ್ಧಿಗಳ ಮಧ್ಯೆ ಪೈಪೋಟಿ ಉಂಟಾಗಬಹುದು ಎಂದು ಕಿಚ್ಚ ಮರುಪ್ರಶ್ನೆ ಹಾಕಿದರು. ಅದಕ್ಕೆ ‘ಚಂದನ್ ಮತ್ತು ಜೆಕೆ’ ಹೆಸರನ್ನು ಹೇಳಿದರು ತೇಜು. ಅಷ್ಟೇ ಅಲ್ಲದೆ ಚಂದನ್ ಗೆಲ್ಲುವ ಚಾನ್ಸ್ ತುಂಬಾ ಇದೆ, ಜೆಕೆನೂ ಗೆಲ್ಲಬಹುದು ಎಂದು ಹೇಳಿದರು.
Comments are closed.