ಬಿಗ್ಬಾಸ್ ಸೀಸನ್ 5 ರ ಮೊದಲ ವಾರ ಬಿಗ್ ಮನೆಯಿಂದ ಸಾಮಾನ್ಯ ಸ್ಪರ್ಧಿ ಸುಮಾ ಹೊರ ಹೋಗಿದ್ದರು. ಈ ವಾರವು ಕೂಡ ಬಿಗ್ ಮನೆಯಿಂದ ಓರ್ವ ಸ್ಪರ್ಧಿ ಔಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ ದಿವಾಕರ್, ಮೇಘಾ, ಸಮೀರ್ ಆಚಾರ್ಯ , ಕೃಷಿ, ಜಗನ್ನಾಥ್ , ಆಶಿತಾ, ದಯಾಳ್ ಮತ್ತು ರಿಯಾಜ್ ಅವರನ್ನು ನಾಮಿನೇಟ್ ಮಾಡಲಾಗಿತ್ತು. ಈ ಎಂಟು ಕಂಟೆಸ್ಟಂಟ್ಗಳಲ್ಲಿ ಮನೆಯಿಂದ ಹೊರ ಹೋಗುವವರು ಯಾರು ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಲ್ಲೂ ಮನೆಮಾಡಿತ್ತು. ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜತೆಯಲ್ಲಿ ಎಲಿಮಿನೇಟ್ ಪ್ರಕ್ರಿಯೆ ನಡೆಯಿತು.
ಈ ವಾರದಲ್ಲಿ ಯಾರು ಹೊರಗೆ ಹೋಗಬೇಕು ಎಂಬುದನ್ನು ಮನೆಯ ಸದಸ್ಯರಿಂದಲೇ ಕೇಳುತ್ತ ಎಲಿಮಿನೇಟ್ ಪ್ರಕ್ರಿಯೆ ಪ್ರಾರಂಭಿಸಿದ್ರು ಸುದೀಪ್. ಮೊದಲಿಗೆ ಸಮೀರ್ ಸೇಫ್ ಆದ್ರು. ಬಳಿಕ ರಿಯಾಜ್, ದಿವಾಕರ್, ಜಗನ್, ಕೃಷಿ, ಆಶಿತಾ ಹಾಗೂ ಕೊನೆಯದಾಗಿ ದಯಾಳ್ ಪದ್ಮನಾಭ್ ಸೇಫ್ ಆದ್ರು. ಮೇಘಾ ಮನೆಯಿಂದ ಹೊರಬೀಳಬೇಕಾಯಿತು.
ಕೇವಲ ಎರಡೇ ವಾರದಲ್ಲಿ ಬಿಗ್ ಮನೆಯಿಂದ ಹೊರಬರುತ್ತಿರುವ ಮೇಘಾರ ಮುಖದಲ್ಲಿ ಯಾವುದೇ ನೋವು ಕಾಣಿಸಿಕೊಂಡಿರಲಿಲ್ಲ. ನಗು ನಗುತ್ತಲೇ ತಮ್ಮ ಬ್ಯಾಗ್ ಹಿಡಿದ್ರು. ಮನೆಯಲ್ಲಿರುವ ಹಿರಿಯ ಸದಸ್ಯರುಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡ್ರು ಹಾಗೂ ಬಿಗ್ಬಾಸ್ ಆದೇಶದಂತೆ ಮುಂದಿನ ವಾರದ ಸೂಪರ್ ಪವರ್ ಅಧಿಕಾರವನ್ನು ದಿವಾಕರ್ಗೆ ನೀಡಿ ಹೊರ ನಡೆದರು.
‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ಮೊದಲ ವಾರ ‘ಜನಸಾಮಾನ್ಯ’ರಾದ ಸುಮಾ ರಾಜ್ ಕುಮಾರ್ ಔಟ್ ಆಗಿದ್ದರು. ಎರಡನೇ ವಾರ ಕೂಡ ಸೆಲೆಬ್ರಿಟಿ ಅಲ್ಲದ ಮೇಘ ಹೊರಗೆ ಬಂದಿದ್ದಾರೆ. ”ನಮ್ಮ ಮತ ಜನಸಾಮಾನ್ಯರಿಗೆ” ಅಂತ ವೀಕ್ಷಕರು ಸಾರಿ ಸಾರಿ ಹೇಳಿದರೂ, ‘ಬಿಗ್ ಬಾಸ್’ ಮನೆಯಿಂದ ‘ಕಾಮನ್ ಮ್ಯಾನ್’ ಹೊರಗೆ ಬರುತ್ತಿರುವುದು ಮಾತ್ರ ಬೇಸರದ ಸಂಗತಿ.
Comments are closed.