ಮನೋರಂಜನೆ

ಪದ್ಮಾವತಿ ಚಿತ್ರದಲ್ಲಿ ರಜಪೂತರ ಇತಿಹಾಸವನ್ನು ತಿರುಚುವುದು ಉದ್ದೇಶವಲ್ಲ : ದೀಪಿಕಾ ಪಡುಕೋಣೆ

Pinterest LinkedIn Tumblr


ಮುಂಬೈ: ಪದ್ಮಾವತಿ ಚಿತ್ರದಲ್ಲಿ ರಜಪೂತರ ಇತಿಹಾಸವನ್ನು ತಿರುಚುವುದು ನಮ್ಮ ಉದ್ದೇಶವಲ್ಲ ಎಂದು ನಟಿ ದೀಪಿಕಾ ಪಡುಕೋಣೆ ಟ್ವೀಟ್‌ ಮಾಡಿದ್ದಾರೆ.

‘ಚಿತ್ರದಲ್ಲಿ ಇತಿಹಾಸವನ್ನು ತಿರುಚುವಂಥದ್ದು ಏನೂ ಇಲ್ಲ ಎಂದು ಪದ್ಮಾವತಿ ಪಾತ್ರಧಾರಿಯಾಗಿ ನಾನು ಆಶ್ವಾಸನೆ ನೀಡಬಲ್ಲೆ’ ಎಂದು ಮೊದಲ ಟ್ವೀಟ್‌ನಲ್ಲಿ ದೀಪಿಕಾ ಹೇಳಿದ್ದಾರೆ.

‘ಈ ದಿಟ್ಟ ಹಾಗೂ ಶಕ್ತಿಶಾಲಿ ಮಹಿಳೆಯ (ಪದ್ಮಾವತಿ) ಕಥೆಯನ್ನು ಜಗತ್ತಿನ ಜತೆಗೆ ಹಂಚಿಕೊಳ್ಳುವುದಷ್ಟೇ ನಮ್ಮ ಉದ್ದೇಶ’ ಎಂದು ದೀಪಿಕಾ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರದಲ್ಲಿ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈ ಚಿತ್ರದಲ್ಲಿ ರಜಪೂತರ ಚರಿತ್ರೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿ ರಜಪೂತ ಕಾರ್ನಿ ಸೇನಾ ಸಂಘಟನೆಯ ಸದಸ್ಯರು ಶುಕ್ರವಾರ ಚಿತ್ರೀಕರಣ ನಡೆಯುತ್ತಿದ್ದ ಜೈಪುರದ ಜಯಗಢ ಕೋಟೆಗೆ ನುಗ್ಗಿ ಬನ್ಸಾಲಿ ಹಾಗೂ ಚಿತ್ರತಂಡದ ಮೇಲೆ ಹಲ್ಲೆ ನಡೆಸಿದ್ದರು.

Comments are closed.