ಮನೋರಂಜನೆ

ಬಿಗ್‌ಬಾಸ್‌ ಮನೆಯಲ್ಲಿ ಕೆರಳಿದ ‘ಒಳ್ಳೆ ಹುಡುಗ’ ! ಇಷ್ಟಕ್ಕೂ ನಿರಂಜನ್ ಮಾಡಿದ್ದೇನು….?

Pinterest LinkedIn Tumblr

pratham

ಮಂಗಳವಾರ ಬಿಗ್‌ಬಾಸ್‌ ಮನೆಯಲ್ಲಿ ಮತ್ತೆ ಬೆಂಕಿ ಹತ್ತಿಕೊಂಡಿದೆ. ಒಂದೆಡೆ ಶಾಂತಚಿತ್ತನಾಗಿದ್ದ ಪ್ರಥಮ್ ಕೆರಳಿದರೆ, ಇನ್ನೊಂದೆಡೆ ಶಾಲಿನಿ-ಶೀತಲ್ ಮನೆಯಲ್ಲಿ ನಡೆಯುತ್ತಿರುವ ಗೌಪ್ಯ ವಿಚಾರವನ್ನು ಬಹಿರಂಗಪಡಿಸಿ ಎಲ್ಲರ ಮಧ್ಯೆ ಹಗ್ಗ-ಜಗ್ಗಾಟ ನಡೆಯುವಂತೆ ಮಾಡಿದ್ದಾರೆ.

ನಿನ್ನೆ ಎಂದಿನಂತೆ ನಾಮಿನೇಷನ್‌ ಪ್ರಕ್ರಿಯೆ ನಡೆಯಿತು. ಈ ವಾರ ನಿರಂಜನ್‌, ಕೀರ್ತಿ, ಓಂಪ್ರಕಾಶ್‌, ರೇಖಾ ಮತ್ತು ಸಂಜನಾ ಕಳೆದ ವಾರದ ಲಕ್ಷುರಿ ಬಜೆಟ್‌ ಟಾಸ್ಕ್‌ನಲ್ಲಿ ಇಮ್ಯುನಿಟಿ ಪಡೆದ ಕಾರಣ ಮನೆ ಸದಸ್ಯರು ಅವರ ಹೆಸರನ್ನ ಸೂಚಿಸುವಂತಿರಲಿಲ್ಲ. ಪ್ರತಿ ವಾರ ಪ್ರಥಮ್‌ ಹೆಸರನ್ನ ನಾಮಿನೇಟ್‌ ಮಾಡುತ್ತಿದ್ದ ಮನೆಯ ಸದಸ್ಯರು ಈ ವಾರ ಪ್ರಥಮ್‌ ಹೆಸರನ್ನ ತೆಗೆದುಕೊಳ್ಳದೇ ಮಾಳವಿಕಾ, ಕಾರುಣ್ಯ, ಮೋಹನ್‌ ಮತ್ತು ಭುವನ್‌ರನ್ನ ನಾಮಿನೇಟ್‌ ಮಾಡಿದ್ದರು. ಈ ವಾರ ಪ್ರಥಮ್‌ ನಿಜವಾಗಿಯೂ ಒಳ್ಳೆ ಹುಡುಗನಾಗಿದ್ದ ಕಾರಣ ಯಾರೊಬ್ಬರೂ ಪ್ರಥಮ್‌ ಹೆಸರನ್ನ ಸೂಚಿಸಲಿಲ್ಲ.

ಆದರೆ ಕ್ಯಾಪ್ಟನ್ ನಿರಂಜನ್ ಗೆ ನೇರ ನಾಮಿನೇಟ್ ಮಾಡಲು ಇಚ್ಛಿಸುವ ಸದಸ್ಯರನ್ನು ‘ಬಿಗ್ ಬಾಸ್’ಗೆ ತಿಳಿಸುವಂತೆ ಹೇಳಿದಾಗ, ಅವರು ಪ್ರಥಮ್ ಹೆಸರನ್ನು ಸೂಚಿಸಿದ್ದಾರೆ. ಪ್ರಥಮ್‌ರನ್ನ ನೇರವಾಗಿ ನಾಮಿನೇಟ್‌ ಮಾಡಿದ ನಿರಂಜನ್‌, ‘ಈ ವಾರವೂ ಪ್ರಥಮ್‌ ಸೇಫ್‌ ಆಗ್ತಾರೆ, ಅವರು ಇನ್ನಷ್ಟು ಫೇಮಸ್‌ ಆಗಲಿ ಅಂತ ಅವರನ್ನ ನೇರವಾಗಿ ನಾಮಿನೇಟ್‌ ಮಾಡಿದ್ದೇನೆ’ ಎಂದು ಕಾರಣ ನೀಡಿದರು.

ನಿರಂಜನ್‌ ನೀಡಿದ ಈ ಕಾರಣ ಪ್ರಥಮ್‌ಗೆ ನೋವುಂಟು ಮಾಡಿತು. ಇದಾದ ನಂತರ ನಿರಂಜನ್‌ ಮೇಲೆ ಕೆಂಡ ಕಾರಲು ಶುರು ಮಾಡಿದ್ರು ಪ್ರಥಮ್‌. ಅಷ್ಟೇ ಅಲ್ಲದೆ ಮನವೊಲಿಸಲು ಬಂದ ನಿರಂಜನ್‌ಗೆ ಬಾಯಿಗೆ ಬಂದಂತೆ ಬೈದು ‘ನೀನೊಬ್ಬ ಕ್ಯಾಪ್ಟನ್‌ ಅಲ್ಲ’ ಎಂದು ರೇಗಾಡಿದರು. ಒಬ್ಬರೆ ಕೂತು ಕಣ್ಣೀರಿಡುತ್ತ ನನ್ನನ್ನು ‘ಆಚೆ ಕಳಿಸಿಬಿಡಿ ಪ್ಲೀಜ್‌’ ಎಂದು ಬಿಗ್‌ಬಾಸ್‌ಗೆ ಮನವಿ ಮಾಡಿಕೊಂಡರು. ಸದ್ಯಕ್ಕೆ ಪ್ರಥಮ್‌, ನಿರಂಜನ್‌ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ರಾತ್ರಿ ಗಾರ್ಡನ್‌ ಏರಿಯಾದಲ್ಲಿ ಮಲಗುವ ಮೂಲಕ ಪ್ರತಿಭಟನೆ ಶುರುಮಾಡಿದ್ದಾರೆ.

Comments are closed.