ಮನೋರಂಜನೆ

‘ಮಾಸ್ತಿ ಗುಡಿ’ ದುರಂತ ಕನ್ನಡ ಚಿತ್ರರಂಗಕ್ಕೆ ಒಂದು ಪಾಠ ಎಂದ ಕಿಚ್ಚ ಸುದೀಪ್…ಮುಂದೆ ಹೇಳಿದ್ದು ಹೀಗೆ …

Pinterest LinkedIn Tumblr

sudeep

ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಜಿಗಿದು ಇಬ್ಬರು ಖಳನಟರು ಮೃತಪಟ್ಟಿರುವ ಘಟನೆ ಕನ್ನಡ ಚಿತ್ರರಂಗಕ್ಕೆ ಒಂದು ಪಾಠ ಎಂದು ನಟ, ನಿರ್ದೇಶಕ ಕಿಚ್ಚ ಸುದೀಪ್ ಅವರು ಮಂಗಳವಾರ ಹೇಳಿದ್ದಾರೆ.

ಮಾಸ್ತಿಗುಡಿ ದುರಂತದ ಬಗ್ಗೆ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸುದೀಪ್ ಅವರು, ಖಳನಟರಾದ ಅನಿಲ್ ಮತ್ತು ಉದಯ್ ಅವರನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರ ಸಾವು ಆಘಾತ ನೀಡಿದ್ದು, ಮೃತರ ಕುಟುಂಬಕ್ಕೆ ದೇವರು ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ತಾಣಗಳಲ್ಲಿ ಯಾರನ್ನು ದೂಷಿಸುವುದು ಸರಿಯಲ್ಲ. ಆಗಿರುವ ಪ್ರಮಾದಕ್ಕೆ ಶಿಕ್ಷೆ ನೀಡಲು ಕಾನೂನು ಇದೆ ಎಂದು ಸುದೀಪ್ ತಿಳಿಸಿದ್ದಾರೆ.

ಇಬ್ಬರು ಖಳ ನಟರನ್ನು ಕಳೆದುಕೊಂಡಿರುವುದಕ್ಕೆ ಬೇರೆಯವರಿಗಿಂತ ಚಿತ್ರತಂಡಕ್ಕೆ ಹೆಚ್ಚಿನ ನೋವಾಗಿರುತ್ತದೆ. ಆ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸುತ್ತಿರುವುದು ಸರಿಯಲ್ಲ ಎಂದ ಸುದೀಪ್, ಕಾಲೇಜು ದಿನಗಳಲ್ಲಿ ನಾನು ಇಬ್ಬರು ಸ್ನೇಹಿತರನ್ನು ಕಳೆದುಕೊಂಡಿದ್ದೆ. ಅಂದಿನಿಂದ ನನಗೆ ಅಂತಹ ಸ್ಥಳಕ್ಕೆ ಹೋಗಲಾಗುತ್ತಿಲ್ಲ ಎಂದರು.

Comments are closed.