ಕರಾವಳಿ

ಟಿಪ್ಪು ಕಿರೀಟ ಧರಿಸಿ, ಟಿಪ್ಪು ಖಡ್ಗ ಹಿಡಿದು ಘೋಷಣೆ ಕೂಗಿದವರಿಂದಲೇ ಟಿಪ್ಪು ಜಯಂತಿಗೆ ವಿರೋಧ ; ಡಾ.ಜಿ. ಪರಮೇಶ್ವರ್

Pinterest LinkedIn Tumblr

parameshwar_press_1

ಮಂಗಳೂರು, ನ.8: ದ.ಕ. ಜಿಲ್ಲೆಗೆ ಹೆಚ್ಚುವರಿ 25 ಗಸ್ತು ಪೊಲೀಸ್ ವಾಹನಗಳನ್ನು ನೀಡಲಾಗುವುದು ಇದರಿಂದ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಅಹಿತಕರ ಘಟನೆ ಸಂಭವಿಸಿದರೆ ತಕ್ಷಣ ಪೊಲೀಸರು ಅತೀ ಶೀಘ್ರವಾಗಿ ಘಟನಾ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

parameshwar_press_2

ನಗರದ ಸರ್ಕ್ಯುಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗಾಗಲೇ ಪೊಲೀಸ್ ಗಸ್ತು ವಾಹನ ನೀಡಲಾಗಿದ್ದು, ಪ್ರಕರಣ ನಡೆದ ಸ್ಥಳಕ್ಕೆ 5 ನಿಮಿಷದೊಳಗೆ ತಲುಪಲು ಸಾಧ್ಯವಾಗಿದೆ. ಇದೇ ರೀತಿ ಮಂಗಳೂರು ಪೊಲೀಸ್ ಕಮಿ ಷನರೇಟ್ ವ್ಯಾಪ್ತಿಯಲ್ಲೂ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

parameshwar_press_3

ಟಿಪ್ಪು ಜಯಂತಿ ಆಚರಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಟಿಪ್ಪು ಕಿರೀಟ ಧರಿಸಿ, ಖಡ್ಗ ಹಿಡಿದು ಟಿಪ್ಪು ಪರ ಘೋಷಣೆ ಕೂಗಿದವರೇ ಇಂದು ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್ ಈ ವೇಳೆ ಉಪಸ್ಥಿತರಿದ್ದರು.

Comments are closed.