ಬೆಂಗಳೂರು: ಯಶ್ ಇವತ್ತು ಇಲ್ಲಿ ಕೂತಿದ್ದಾನೆ ಎಂದರೆ ಅದಕ್ಕೆ ಮಾಧ್ಯಮ ಕೂಡ ಒಂದು ಕಾರಣ. ನನ್ನ ಏಳಿಗೆಯನ್ನು ಪ್ರತಿ ಹೆಜ್ಜೆಯಲ್ಲೂ ಮಾಧ್ಯಮ ಜೊತೆಗಿದೆ. ನನಗೆ ಯಾರ ವಿರುದ್ಧವೂ ಸಿಟ್ಟು ಇಲ್ಲ ಎಂದು ನಟ ಯಶ್ ಹೇಳಿದ್ದಾರೆ.
‘ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾ ಗೆದ್ದ ಸಂಭ್ರಮದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಯಶ್, ಸಿನಿಮಾ ಮಂದಿ ಶೋಕಿ ಮಾಡುತ್ತಿದ್ದಾರೆ, ಅವರಿಗೆ ಸಾಮಾಜಿಕ ಬದ್ಧತೆ ಇಲ್ಲ. ಚಿತ್ರ ರಂಗ ಸರಿಯಿಲ್ಲ ಎಂದು ವರದಿಯಾಗುತ್ತಿದೆ. ಅದು ಹಾಗೇ ಅಲ್ಲ. ಸಿನಿಮಾ ಎಲ್ಲ ಮಂದಿಯನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಬೇಡಿ. ನಮಗೂ ಸಾಮಾಜಿಕ ಕಾಳಜಿ ಇದೆ ಎಂದು ತಿಳಿಸಿದರು.
ಇಂದಿನ ಸುದ್ದಿಗೋಷ್ಟಿಯಲ್ಲೂ ಯಶ್ ರೈತರ ಸಮಸ್ಯೆಯ ಬಗ್ಗೆ ಎಲ್ಲರೂ ಒಂದೇ ವೇದಿಕೆಯಲ್ಲಿ ಬನ್ನಿ. ಅಲ್ಲಿ ಕುಳಿತು ಚರ್ಚೆ ಮಾಡೋಣ ಎಂದು ಮಾಧ್ಯಮಗಳಲ್ಲಿ ಕೇಳಿದರು.
ನಾನು ಸಿನಿಮಕ್ಕಾಗಿ ಮಾಡುವ ಗಿಮಿಕ್ ಮಾಡುತ್ತಿದ್ದೇನೆ ಎನ್ನುವ ಮಾತು ಬಂದಿದೆ. ಸಿನಿಮಾಕ್ಕೆ ಡ್ರಾಮಾ ಮಾಡುತ್ತಿದ್ದಾನೆ ಅಂತ ಹೇಳಿದವರು ಇದ್ದಾರೆ. ಆದರೆ ಯಶ್ ಬದಕಿರುವುದು ಜನರಿಗಾಗಿ. ನಾನು ಯಶೋಮಾರ್ಗ ಟ್ರಸ್ಟ್ ಅನ್ನು ಸುದ್ದಿಗೋಷ್ಠಿ ಮಾಡಿ ಆರಂಭಿಸಿಲ್ಲ. ಅದರಲ್ಲಿ ನನ್ನ ಫೋಟೋ ಸಹ ಇಲ್ಲ ಎಂದು ಹೇಳಿದರು.
ಇವತ್ತು ನಾನು ತೆರದ ಪುಸ್ತಕದ ತರ ನಿಮ್ಮ ಮುಂದೆ ಇದ್ದೇನೆ. ಮಾಧ್ಯಮ ಅಂದ್ರೆ ಯಶ್ಗೆ ಅಸಡ್ಡೆ ಅನ್ನೋ ನೋವನ್ನು ನೀವು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದ್ದೀರಿ. ಕಾವೇರಿ ಹೋರಾಟದ ಸಮಯದಲ್ಲಿ ಅಂದು ನಾನು ಇಲ್ಲಿ ಇರಲಿಲ್ಲ. ಅಂದು ನಾನು ಏನಾದ್ರೂ ಹೇಳಿದ್ದರೆ ಅದು ಮತ್ತೊಂದು ದೊಡ್ಡ ಸುದ್ದಿಯಾಗುತಿತ್ತು. ಹೀಗಾಗಿ ನಾನು ಮಾಧ್ಯಮಗಳಿಂದ ದೂರ ಇದ್ದೆ ಎಂದು ವಿವರಿಸಿದರು.
ನೆಗಟಿವ್ ಸುದ್ದಿಗಳು ಮಾಧ್ಯಮಗಳಲ್ಲಿ ಬೇಗ ಪ್ರಸಾರ ಆಗುತ್ತದೆ ಎಂದ ಅವರು, ನಮ್ಮ ಮನೆಯ ಅಕ್ವೆರಿಯಂ ಮೂರು ಬಾರಿ ಸರಿ ಮಾಡದ್ದಕ್ಕೆ ಮರಳಿ ಹಣ ಕೊಡು ಎಂದು ಪ್ರಶ್ನಿಸಿದ್ದಕ್ಕೆ ರಿಪೇರಿ ಮಾಡಿದ ವ್ಯಕ್ತಿ ನಾನು ಮಾಧ್ಯಮದ ಮುಂದೆ ಹೋಗುತ್ತೇನೆ ಎನ್ನುವ ಉದಾಹರಣೆ ಕೊಟ್ಟು ನಮಗೂ ವೈಯಕ್ತಿಕ ಜೀವನ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಟಿ ನಿರ್ಮಾಪಕ ಕೆ.ಮಂಜು, ನಟಿ ರಾಧಿಕಾ ಪಂಡಿತ್, ಲಹರಿ ಕಂಪೆನಿಯ ಮುಖ್ಯಸ್ಥ ಲಹರಿ ವೇಲು ಉಪಸ್ಥಿತರಿದ್ದರು.
Comments are closed.