ಬೆಂಗಳೂರು: ರಾಜರಾಜೇಶ್ವರಿನಗರದ ತನ್ನ ಮನೆಗೆ ನಾಲ್ವರು ಯುವಕರು ನುಗ್ಗಿ ದಾಂಧಲೆ ನಡೆಸಿ ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕಿರುತೆರೆ ನಟಿ ಮೇಘನಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೆಲದಿನಗಳ ಹಿಂದೆ ನನ್ನ ಮನೆಗೆ ಏಕಾಎಕಿ ನುಗ್ಗಿದ ನವೀನ್,ದರ್ಶನ್, ಪೃಥ್ವಿ, ವಿನೂತನ್ ಸೇರಿ ನಾಲ್ವರು ದಾಂಧಲೆ ನಡೆಸಿ ಲೈಂಗಿಕ ಕಿರುಕುಳ ನೀಡಿ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ಮೇಘನಾ ರಾಜರಾಜೇಶ್ವರಿನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟ ಕಿರುತೆರೆ ನಟ ಹರೀಶ್ ಅವರೊಂದಿಗೆ ನಾಲ್ಕೈದು ವರ್ಷಗಳಿಂದ ಮೇಘನಾ ಅವರು ಲಿವಿಂಗ್ ಟು ಗೆದರ್ ಸಂಬಂಧ ಹೊಂದಿದ್ದು ಇಬ್ಬರ ವಿವಾಹ ನಿಶ್ಚಿತಾರ್ಥ ಮಾಡಿಕೊಂಡು ವಿವಾಹದ ಸಿದ್ಧತೆಯಲ್ಲಿದ್ದರು.
ಆದರೆ ಹರೀಶ್ ಅನಾರೋಗ್ಯಕ್ಕೆ ತುತ್ತಾದ ವೇಳೆಯಾಗಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆಯಾಗಲಿ ಹರೀಶ್ನನ್ನು ನೋಡುವುದಕ್ಕಾಗಲಿ ಆರೈಕೆ ಮಾಡುವುದಕ್ಕಾಗಲಿ ಹೈದರಾಬಾದ್ನಲ್ಲಿದ್ದ ಮೇಘನಾ ಬಂದಿರಲಿಲ್ಲ ಇದು ಹರೀಶ್ ಸೋದರ ನವೀನ್ ಆಕ್ರೋಶಕ್ಕೆ ಕಾರಣವಾಗಿತ್ತು.
ಹರೀಶ್ ಡೆಂಗ್ಯು ಜ್ವರದಿಂದ ಮೃತ ಹೊಂದಿದಾಗಲೂ ಹರೀಶ್ ಕುಟುಂಬದವರ ನೆರವಿಗಾಗಲಿ ಬಾರದ ಮೇಘನಾ ಸೌಜನ್ಯಕ್ಕಾದರೂ ಮಾತನಾಡದಿರುವುದು ನವೀನ್ನನ್ನು ಮತ್ತಷ್ಟು ಕೆರಳಿಸಿತ್ತು.ಮೇಘನಾ ಅವರ ಬಳಿ ಬಂದ ನವೀನ್ ತನ್ನ ಅಣ್ಣ ನೀಡಿರುವ ಕಾರು ಹಣ ಕೊಡುವಂತೆ ಒತ್ತಾಯಿಸ ತೊಡಗಿದ್ದಾನೆ.
ಕೆಲ ದಿನಗಳ ಕಾಲ ಸತಾಯಿಸಿದ ಮೇಘನಾ ಕಳೆದ ಸೆಪ್ಟೆಂಬರ್ನಲ್ಲಿ ಕಾರು ಸ್ವಲ್ಪ ಹಣ ನೀಡಿ ನವೀನ್ ಆತನ ಸ್ನೇಹಿತರನ್ನು ಕಳುಹಿಸಿದ್ದು ಕೆಲದಿನಗಳ ಹಿಂದೆ ನವೀನ್,ದರ್ಶನ್, ಪೃಥ್ವಿ, ವಿನೂತನ್ ಸೇರಿ ನಾಲ್ವರು ನನ್ನ ಮನೆಗೆ ನುಗ್ಗಿ ದಾಂಧಲೆ ನಡೆಸಿ ಪೀಠೋಪಕರಣಗಳು ಬೆಲೆ ಬಾಳುವ ವಸ್ತುಗಳನ್ನು ದೋಚಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ದೂರು ನೀಡಿದ್ದು ಪ್ರಕರಣ ದಾಖಲಿಸಿರುವ ರಾಜರಾಜೇಶ್ವರಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಅನುಚೇತ್ ಅವರು ತಿಳಿಸಿದ್ದಾರೆ.
Comments are closed.