ಮನೋರಂಜನೆ

ಬಿಗ್‌ಬಾಸ್‌ ಮನೆಯಲ್ಲಿ ‘ಪ್ರಥಮ್’ನ್ನನ್ನು ಟಾರ್ಗೆಟ್ ಮಾಡಿದ್ದ ಶಾಲಿನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್ ಹೇಳಿದ್ದೇನು…?

Pinterest LinkedIn Tumblr

shalini

ಬಿಗ್‌ಬಾಸ್‌ ಮನೆಯಲ್ಲಿ ಶನಿವಾರದಂದು ಕಿಚ್ಚ ಸುದೀಪ್ ಗಾಯಗೊಂಡಿರುವ ಶಾಲಿನಿಯವರನ್ನು ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.

ಲಾಂಛನ ಇಡುವ ವಿಚಾರವಾಗಿ ಪ್ರಥಮ್ನೊಂದಿಗೆ ನಡೆತ ಕಿತ್ತಾಟದ ವೇಳೆ ಶಾಲಿನಿ ಗಾಯಗೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಶಾಲಿನಿ ಅವರು ಪ್ರಥಮ್ ವಿರುದ್ಧ ದೊಡ್ಡ ರಂಪಾಟವನ್ನೇ ಮಾಡಿದ್ದು, ಪ್ರಥಮ್ ಬೇಕೆಂದೇ ಹೊಡೆದಿದ್ದಾನೆ ಎಂದು ಎಲ್ಲರಲ್ಲೂ ಹೇಳಿಕೊಂಡು ಸಿಂಪತಿ ಗಳಿಸಲು ಯತ್ನಿಸಿದ್ದರು. ಆದರೆ ಪ್ರಥಮ್ ತಾನು ಹೊಡೆದಿಲ್ಲ ಎಂದೇ ತನ್ನ ವಾದವನ್ನು ಮುಂದಿಟ್ಟಿದ್ದರು. ಈ ಮಧ್ಯೆ ಬಿಗ್ಬಾಸ್ಕೂಡ ವೈಯಕ್ತಿಕವಾಗಿ ಹಲ್ಲೆ ಮಾಡಿಲ್ಲ. ಲಾಂಛನ ಕಿತ್ತುಕೊಳ್ಳುವ ವೇಳೆ ಅಚಾನಕ್ ಆಗಿ ಗಾಯವಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಶಾಲಿನಿ ಮಾತ್ರ ತನ್ನದೇ ಸರಿ ಎಂಬಂತೆ ವಾದಿಸುತ್ತಾಳೆ ಇದ್ದರು.

shali

ಶನಿವಾರ ಬಿಗ್‌ಬಾಸ್‌ ಮನೆಯಲ್ಲಿ ಕಿಚ್ಚ ನಡೆಸೋ ಪಂಚಾಯ್ತಿಯಲ್ಲಿ ಈ ಬಾರಿ ಶಾಲಿನಿ ಅವರನ್ನು ಸುದೀಪ್ ಚೆನ್ನಾಗಿಯೇ ತರಾಟೆಗೆ ತೆಗೆದುಕೊಂಡರು. ‘ಪ್ರಥಮ್ನನ್ನನ್ನ ಹೊಡೆದ’ ಎಂಬ ಶಾಲಿನಿಯ ವಾದದ ವಿಚಾರವಾಗಿ ಕಿಚ್ಚ ಶನಿವಾರ ಮಾತನಾಡಿದರು. ಅಷ್ಟೇ ಅಲ್ಲ ಬಿಗ್‌ಬಾಸ್‌ ಕಾಲರ್‌ ಆಫ್‌ ದಿ ವೀಕ್‌ ಆಗಿದ್ದ ಸ್ಪರ್ಶಾ ಎಂಬವರು ಕೂಡ ‘ಪ್ರಥಮ್ನ ಯಾಕೆ ಟಾರ್ಗೇಟ್ಮಾಡ್ತಿದ್ದೀರಾ ?’ ಎಂಬ ಪ್ರಶ್ನೆಯನ್ನ ಶಾಲಿನಿಗೆ ಕೇಳಿದ್ರು. ಜೊತೆಗೆ ಪ್ರಥಮ್ ಹೊರಗೆ ಹೋದರೆ ನಿಮಗೆ ಬಿಗ್ಬಾಸ್ಮನೆಯಲ್ಲಿ ಉಳಿಯಲು ಸಾಧ್ಯ. ಪ್ರಥಮ್ ಬಗ್ಗೆ ನಿಮಗೆ ಹೆದರಿಕೆ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಸಂಬಂಧ ಶಾಲಿನಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರು. ಅದೇ ರೀತಿ ಕಿಚ್ಚ ಸಹ ಶಾಲಿನಿಯವರ ತಪ್ಪನ್ನ ಮನವರಿಕೆ ಮಾಡಿಕೊಡೋದ್ರಲ್ಲಿ ಸಫಲವಾದ್ರು. ಕೊನೆಗೆ ಶಾಲಿನಿ ಕಿಚ್ಚನ ಮಾತುಗಳಿಗೆ ಬೆಲೆ ನೀಡಿ ಇನ್ಮುಂದೆ ಆ ರೀತಿ ಆಗದಂತೆ ತಿದ್ದಿಕೊಳ್ಳುತ್ತೇನೆ ಎಂದು ಕೊನೆಯಲ್ಲಿ ಹೇಳಿದರು.

ಈ ಮಧ್ಯೆ ಭುವನ್ಗೆ ಎಚ್ಚರಿಕೆ ನೀಡಿದ ಕಿಚ್ಚ, ಯಾವುದೇ ಕಾರಣಕ್ಕೂ ಯಾರ ಕಾಲರ್ಹಿಡಿದು ಮಾತನಾಡಬೇಡಿ, ಇದು ನಿಮಗೆ ಅಪಾಯ ತರೋದಂತೂ ಗ್ಯಾರಂಟಿ. ಪ್ರಥಮ್ ಅವರ ಕಾಲರ್ 2 ಸೆಕೆಂಡ್ ಜಾಸ್ತಿ ಹಿಡಿದಿದ್ದರೆ ನಿಮ್ಮನ್ನು ಬಿಗ್ಬಾಸ್ಮನೆಯಿಂದ ಹೊರಗೆಹೋಗುವಂತಾಗುತ್ತಿತ್ತು ಎಂದು ಎಚ್ಚರಿಕೆ ನೀಡಿದರು. ಈ ವೇಳೆಯಲ್ಲಿ ಪ್ರಥಮ್ಸಹ ಶಾಲಿನಿ ವಿಚಾರವಾಗಿ ಮಾತನಾಡಿ ‘ಅವರು ಹೇಗೆ ಇದ್ರು ನನ್ನ ಅಕ್ಕನಂತೆ’ ಎಂದು ನಡೆದ ಘಟನೆಗೆ ತಿಲಾಂಜಲಿ ಇಟ್ಟರು.

Comments are closed.