https://youtu.be/l0Cjexc5VoU
ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆಯಿಂದಾಗಿ ರಾಜ್ಯಕ್ಕೆ ರಾಜ್ಯವೇ ಹೊತ್ತಿ ಉರಿಯುತ್ತಿರುವಾಗ ರಾಕಿಂಗ್ ಸ್ಟಾರ್ ಯಶ್ ಮಾತ್ರ ಅಮೆರಿಕಾದಲ್ಲಿದ್ದರು. ಅವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿ ಇಲ್ಲವೆ? ಎಂದು ಸುದ್ದಿ ಮಾಧ್ಯಮವೊಂದು ಟೀಕೆ ಮಾಡಿತ್ತು.
ಸಿನಿಮಾ ನಟರು ಸಿನಿಮಾದಲ್ಲಿ ಮಾತ್ರ ಡೈಲಾಗ್ ಹೊಡೆದು ರೈತರ ಪರ ಎಂದು ಹೇಳುತ್ತಾರೆ. ನಿಜವಾದ ಕಾಳಜಿ ಇದ್ದರೆ ಅವರು ರೈತರಿಗಾಗಿ ಹೋರಾಟ ಮಾಡಲಿ ಎಂದು ಮಾಧ್ಯಮ ಯಶ್ ಅವರಿಗೆ ಸವಾಲು ಹಾಕಿತ್ತು.
ಈ ಸವಾಲನ್ನು ಸ್ವೀಕರಿಸಿದ ಯಶ್ ಮಂಗಳವಾರ ಫೇಸ್ಬುಕ್ನಲ್ಲಿ ನನ್ನ ಮಾತಿಗೆ ನಾನು ಬದ್ಧ ಎಂದು ಹೇಳಿ ವಿಡಿಯೊ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಯಶ್ ಅವರ ಈ ವಿಡಿಯೊ ಸಂದೇಶ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
Comments are closed.