ಬಿಗ್ ಬಾಸ್ ಮನೆಯಲ್ಲಿ ಈ ಹುಡುಗನೇ ಎಲ್ಲರ ಕೇಂದ್ರ ಬಿಂದು ! ಎಲ್ಲರೊಂದಿಗೆ ಗಲಾಟೆ ಮಾಡಿಕೊಂಡು, ತಾನೇ ಸರಿ ಎಂಬ ಭಾವನೆಯಲ್ಲಿ ಜಗಳಕಾಯುತ್ತಿರುವ ಈತನ ಹೆಸರು ಪ್ರಥಮ್. ಒಳ್ಳೇ ಹುಡುಗ, ಖಂಡಿಸುತ್ತಲೇ ಇರುವ ಹುಡುಗ! ಬಿಗ್ಬಾಸ್ನ ಪ್ರಥಮ್ನನ್ನು ರಾಜ್ಯವೆಲ್ಲ ಗುರುತಿಸುತ್ತಿರುವುದು ಹೀಗೆ. ಸಿನಿಮಾ ನಿರ್ದೇಶಕ ಎಂದು ಹೇಳಿಕೊಂಡಿರುವ ಪ್ರಥಮ್ ಅಷ್ಟಕ್ಕೂ ಬಿಗ್ಬಾಸ್ ಮನೆ ಹೊಕ್ಕಿದ್ದು ಹೇಗೆ? ಈ ಪ್ರಥಮ್ ಯಾರೆಂಬುದು ಸ್ವತಃ ಈ ಟಿವಿ ವಾಹಿನಿಯವರೆಗೆ ಗೊತ್ತಿರಲಿಲ್ಲ!
ಬಿಗ್ಬಾಸ್ ಮನೆಗೆ ಯಾರನ್ನೆಲ್ಲ ಕಳುಹಿಸಬಹುದು ಎಂಬುದರ ಬಗ್ಗೆ ಆಡಿಷನ್ ಮಾಡುವಾಗ ಮೈಸೂರು ಮೂಲದ ಬೆಂಗಳೂರಿನ ಗಾಂನಗರದ ರಸ್ತೆಗಳಲ್ಲಿ ಓಡಾಡಿಕೊಂಡಿದ್ದ ಪ್ರಥಮ್ ಸೀದಾ ಹೋಗಿದ್ದು ಈಟಿವಿ ಕಚೇರಿಗೆ! ‘ನಾನು ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತೇನೆ. ಈ ಶೋಗೆ ನನ್ನನ್ನು ನೀವು ಆಯ್ಕೆ ಮಾಡಲೇಬೇಕು’ ಅಂತ ಕಲರ್ಸ್ ಕನ್ನಡ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಮುಂದೆ ನಿಂತರಂತೆ. ಗುಂಡ್ಕಲ್ಗೆ ಈ ಪ್ರಥಮ್ನಲ್ಲಿ ಹುಚ್ಚ ವೆಂಕಟ್ ಕಾಣಿಸಿದನೋ ಏನೋ ಗೊತ್ತಿಲ್ಲ. ‘ನೋಡಪ್ಪಾ, ನೀನು ಬಿಗ್ಬಾಸ್ಗೆ ಆಯ್ಕೆ ಆಗೋದು ಆಮೇಲಿನ ವಿಚಾರ. ಈ ಶೋ ಬಗ್ಗೆ ಜನ ಏನೆಂದುಕೊಳ್ಳುತ್ತಿದ್ದಾರೆ ಎಂಬುದರ ಅಭಿಪ್ರಾಯ ಸಂಗ್ರಹಿಸಿಕೊಂಡು ಬಾ’ ಅಂತ ಕಳುಹಿಸಿದರಂತೆ.
ವಾಹಿನಿ ಮುಖ್ಯಸ್ಥರು ಕೊಟ್ಟ ಕೆಲಸವನ್ನು ಅವರೇ ಶಾಕ್ ಆಗುವಂತೆ ಮಾಡಿಕೊಂಡು ಬಂದರು ಪ್ರಥಮ್! ಯಾಕೆ ಶಾಕ್ ಆಗಿದ್ದು? ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮುತ್ತಪ್ಪ ರೈ, ಸಿನಿಮಾ ನಟರಾದ ರಾಘವೇಂದ್ರ ರಾಜ್ಕುಮಾರ್, ಸುದೀಪ್, ಶಿವರಾಜ್ ಕುಮಾರ್- ಹೀಗೆ ಘಟಾನುಘಟಿಗಳನ್ನೇ ಮಾತನಾಡಿಸಿ, ಬಿಗ್ಬಾಸ್ ರಿಯಾಲಿಟಿ ಶೋ ಕುರಿತು ಅಭಿಪ್ರಾಯ ಕಲೆಹಾಕಿ ತಂದರು.
ತಾವು ನಿರೀಕ್ಷಿಸದ ವ್ಯಕ್ತಿಗಳಿಂದ ಬಿಗ್ಬಾಸ್ ಬಗ್ಗೆ ಮಾತನಾಡಿಸಿದ್ದನ್ನು ಕಂಡು ಬೆರಗಾದ ವಾಹಿನಿಯವರು, ‘ಬಿಗ್ಬಾಸ್ ಮನೆ ಪ್ರವೇಶಿಸಲು ನೀನೇ ಸರಿಯಪ್ಪಾ’ ಅಂತ ಸೀದಾ ಬಿಡದಿ ಸಮೀಪದ ಬಿಗ್ಬಾಸ್ ಮನೆಗೆ ಕಳುಹಿಸಿದ್ದಾರೆ. ಮನೆ ಸೇರಿಕೊಂಡಿರುವ ಪ್ರಥಮ್, ವಾಹಿನಿ ಮುಖ್ಯಸ್ಥರ ಕಲ್ಪನೆಯಂತೆಯೇ ಆಟವಾಡುತ್ತಿದ್ದಾರೆ. ಹುಚ್ಚ ವೆಂಕಟನನ್ನು ಓವರ್ಟೇಕೂ ಮಾಡಬಹುದು. ಸದ್ಯಕ್ಕೆ ವಾಹಿನಿಯ ಟಿಆರ್ಪಿ ಪಾಯಿಂಟ್ ಕೂಡ ಈತನೇ. ಇಲ್ಲಿರುವ ಒಂದಿಷ್ಟು ೆಟೋಗಳು ಪ್ರಥಮ್ನ ಬಿಗ್ಬಾಸ್ ಪೂರ್ವದ ಜರ್ನಿಯನ್ನು ಹೇಳುತ್ತವೆ.
Comments are closed.