ಮನೋರಂಜನೆ

ಪ್ರಧಾನಿ ಮೋದಿ ವಿರುದ್ಧ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದೇನು ಗೊತ್ತಾ..?

Pinterest LinkedIn Tumblr

anurag-kashyap

ನಿರ್ದೇಶಕ ಕರಣ್ ಜೋಹಾರ್ ನಿರ್ದೇಶನದ ಯೇ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಪಾಕಿಸ್ತಾನ ನಟ ಪವಾದ್ ಖಾನ್ ನಟಿಸಿರುವುದಕ್ಕೆ ನಿರ್ದೇಶಕ ಕರಣ್ ಕ್ಷಮೆಯಾಚಿಸಬೇಕಾ ಎಂದು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.

ತಮ್ಮ ಚಿತ್ರದಲ್ಲಿ ಪಾಕ್ ನಟ ನಟಿಸಿರುವುದಕ್ಕೆ ಕರಣ್ ಜೋಹಾರ್ ಕ್ಷಮೆಯಾಚಿಸಬೇಕಾ ಎಂದು ಪ್ರಶ್ನಿಸಿರುವ ಅನುರಾಗ್ ಕಶ್ಯಪ್ ಪ್ರಧಾನಿ ಮೋದಿ ಅವರು ಲಾಹೋರ್ ಗೆ ತೆರಳಿ ಪಾಕ್ ಪ್ರಧಾನಿ ನವಾಜ್ ಷರೀಫ್ ರನ್ನು ಭೇಟಿಯಾಗಿ ಬಂದ ಮೇಲೆ ಕ್ಷಮೆಯಾಚಿಸಿದ್ದರಾ ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ನಟ ಫವಾದ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಯೇ ದಿಲ್ ಹೈ ಮುಷ್ಕಿಲ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದರೂ ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಬೇಕು ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾರತದ ಚಿತ್ರಮಂದಿರ ಮಾಲೀಕರು ಮತ್ತು ಪ್ರದರ್ಶಕರ ಸಂಘ(ಸಿಒಇಎಐ) ಪಾಕಿಸ್ತಾನ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರು ಪಾಲ್ಗೊಂಡಿರುವ ಚಿತ್ರಗಳಿಗೆ ಬಿಡುಗಡೆಗೆ ಅವಕಾಶವಿಲ್ಲ ಎಂದು ಹೇಳಿತ್ತು.

ಮುಷ್ಕಿಲ್ ಚಿತ್ರದ ಜತೆಗೆ ಶಾರುಖ್ ಖಾನ್ ಅಭಿನಯದ ರಯೀಸ್ ನಲ್ಲಿ ಪಾಕ್ ಮೂಲದ ಮಾಹೀರಾ ಖಾನ್ ನಟಿಸಿದ್ದಾರೆ ಎಂಬ ಕಾರಣಕ್ಕೆ ಆ ಚಿತ್ರದ ರಿಲೀಸ್ ಗೂ ತಡೆ ಬೀಳಬಹುದು.

Comments are closed.