ಮನೋರಂಜನೆ

ಕುಮಾರಸ್ವಾಮಿ ಪುತ್ರ ನಿಖಿಲ್ ಅಭಿನಯದ ಜಾಗ್ವಾರ್ ಸಿನಿಮಾ ವಿಶ್ಯಾದ್ಯಂತ ಸಾವಿರಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಬಿಡುಗಡೆ; ಬೆಂಗಳೂರಿನಲ್ಲಿ ಸಿನಿಮಾ ನೋಡಿದ ಹೆಚ್‍ಡಿಕೆ

Pinterest LinkedIn Tumblr

jaguar

ಬೆಂಗಳೂರು: ನಾಯಕನಟನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿರೋ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅಭಿನಯದ ಜಾಗ್ವಾರ್ ಸಿನಿಮಾ ವಿಶ್ಯಾದ್ಯಂತ ಸಾವಿರಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಇವತ್ತು ರಿಲೀಸ್ ಆಗಿದೆ.

ರಾಜ್ಯದಲ್ಲಿ 250ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು ಹಲವು ಚಿತ್ರಮಂದಿರಗಳಲ್ಲಿ ಈಗಾಗ್ಲೇ ಮೊದಲ ಪ್ರದರ್ಶನ ಆರಂಭವಾಗಿದೆ. ಚಿಕ್ಕಬಳ್ಳಾಪುರ, ಬಳ್ಳಾರಿ ಥಿಯೇಟರ್‍ಗಳಲ್ಲೂ ಮೊದಲ ಶೋ ಶುರುವಾಗಿದೆ. ಬೆಂಗಳೂರಿನ ಈಶ್ವರಿ ಥಿಯೇಟರ್‍ನಲ್ಲಿ 7 ಗಂಟೆಗೆ ಶೋ ಆರಂಭವಾಗಿದೆ. ಮಾಗಡಿ ರಸ್ತೆಯಲ್ಲಿರುವ ವೀರೇಶ್ ಥಿಯೇಟರ್‍ಗೆ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿ ಜನರೊಂದಿಗೆ ಕುಳಿತು ಸಿನಿಮಾ ನೋಡಿದ್ರು.

ಇದೇ ವೇಳೆ ಮಾತನಾಡಿದ ಅವರು, ಬಿಟ್ಟಿ ದುಡ್ಡಲ್ಲಿ ನಾನು ಸಿನಿಮಾ ಮಾಡಿಲ್ಲ. ಅಥವಾ ಇನ್ಯಾರದ್ದೋ ದುಡ್ಡಲ್ಲಿ ಸಿನಿಮಾ ಮಾಡಿಲ್ಲ. ಸಾಲ ಮಾಡಿ ಸಿನಿಮಾ ಮಾಡಿದ್ದೇನೆ. ಡಿಸೆಂಬರ್‍ಗೆ ನಿಖಿಲ್ ಕುಮಾರ್ ನಟನೆ ಇನ್ನೊಂದು ಸಿನಿಮಾ ಹೆಸರು ಪ್ರಕಟಿಸಲಾಗುತ್ತದೆ. ನಟ ಪವನ್ ಕಲ್ಯಾಣ್ ಚೆನ್ನಾಂಬಿಕಾ ಫಿಲಂಸ್ ಜೊತೆ ಸಿನಿಮಾ ಮಾಡೋದಾಗಿ ಒಪ್ಪಿಕೊಂಡಿದ್ದಾರೆ ಅಂತ ಹೇಳಿದ್ರು. ಇಂದು ಬೆಳಗ್ಗೆ 9 ಗಂಟೆಗೆ ಸಂತೋಷ್ ಥಿಯೇಟರ್‍ಗೆ ದೇವೇಗೌಡರ ಜೊತೆ ನಿಖಿಲ್ ಕೂಡ ಭೇಟಿ ನೀಡಲಿದ್ದಾರೆ.

ಇತ್ತ ಜಾಗ್ವಾರ್ ಚಿತ್ರ ಯಶಸ್ವಿಯಾಗಲಿ ಅಂತ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ದೇವಿಗೆ ಜಿ.ಟಿ.ದೇವೇಗೌಡ ವಿಶೇಷ ಪೂಜೆ ಸಲ್ಲಿಸಿದ್ರು. ಜೊತೆಗೆ ಮಂಡ್ಯದಲ್ಲೂ ಚಿತ್ರ ಯಶಸ್ವಿಯಾಗಲಿ ಅಂತ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ನಡೆಸಲಾಗ್ತಿದೆ.

Comments are closed.