ಮನೋರಂಜನೆ

ಗೋವಾದ ಅಜ್ಞಾತ ಸ್ಥಳದಲ್ಲಿ ಇಂದು ಯಶ್, ರಾಧಿಕಾ ನಿಶ್ಚಿತಾರ್ಥ; ತಾರೆಯರ ದಂಡು

Pinterest LinkedIn Tumblr

Yash-Radhika2ಬೆಂಗಳೂರು: ಸ್ಯಾಂಡಲ್ ವುಡ್ ನ ಬೇಡಿಕೆಯ ನಟ ಯಶ್ ಹಾಗೂ ಖ್ಯಾತ ನಟಿ ರಾಧಿಕಾ ಪಂಡಿತ್ ನಿಶ್ಚಿತಾರ್ಥ ವರಮಹಾಲಕ್ಷ್ಮೀ ದಿನವಾದ ಇಂದು (ಶುಕ್ರವಾರ) ಗೋವಾದ ಅಜ್ಞಾತ ಸ್ಥಳವೊಂದರಲ್ಲಿ ನಡೆಯಲಿದೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ರೆಬೆಲ್ ಸ್ಟಾರ್ ಅಂಬರೀಶ್, ನಿರ್ಮಾಪಕರಾದ ಕೆ.ಮಂಜು, ಮಹೇಶ್ ರಾವ್, ಅನಿಲ್ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖ ಗಣ್ಯರು ಗುರುವಾರ ಗೋವಾಕ್ಕೆ ತೆರಳಿದ್ದಾರೆ.

ಗೋವಾದ ಅಜ್ಞಾತ ಸ್ಥಳದಲ್ಲಿ ಹಾಕಿರುವ ಅದ್ದೂರಿ ಸೆಟ್ ನಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ನಿಶ್ಚಿತಾರ್ಥ ಬೆಳಗ್ಗೆ 11ಗಂಟೆಗೆ ನಡೆಯಲಿದೆ ಎಂದು ಟಿವಿ ಚಾನೆಲ್ ಗಳ ವರದಿ ತಿಳಿಸಿದೆ. ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಚಿತ್ರರಂಗದ ಗಣ್ಯರು ಯಶ್, ರಾಧಿಕಾ ನಿಶ್ಚಿತಾರ್ಥದ ಕುರಿತು ಹೆಚ್ಚಿನ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ.

ಮಾತುಕತೆಗೆ ಹೋಗುತ್ತಿದ್ದೇವೆ…ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ: ಯಶ್ ತಾಯಿ
ಚಿತ್ರರಂಗದಲ್ಲಿ ಇಂದು ಯಶ್ ಏನೇ ಆಗಿದ್ದರು ಅದು ಅಭಿಮಾನಿಗಳಿಂದಾಗಿ. ಯಶ್ ಮದುವೆ ಬಗ್ಗೆ ಮಾತುಕತೆ ನಡೆಸಲು ಗೋವಾಕ್ಕೆ ತೆರಳುತ್ತಿದ್ದೇವೆ. ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ನಾಳೆ ನಿಶ್ಚಿತಾರ್ಥವೇ ಎಂಬ ಪ್ರಶ್ನೆಗೆ…ಅಲ್ಲ ನಾವು ಮಾತುಕತೆಗೆ ಹೋಗುತ್ತಿದ್ದೇವೆ. ನಂತರ ಎಲ್ಲವನ್ನೂ ನಿಮಗೆ ತಿಳಿಸುತ್ತೇವೆ ಎಂದು ಯಶ್ ತಾಯಿ ಪುಷ್ಪಾ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರಿಗೆ ಜಾಣತನದ ಉತ್ತರ ಕೊಟ್ಟು ಜಾರಿಕೊಂಡರು. ಯಶ್ ತಂದೆ, ತಂಗಿ ಕೂಡಾ ಗೋವಾಕ್ಕೆ ತೆರಳಿದ್ದಾರೆ.

-ಉದಯವಾಣಿ

Comments are closed.