ಶ್ರೀಪ್ರಸನ್ನ ಆಂಜನೇಯ ಸ್ವಾಮಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಧಮ್ಮ ಅವರು ನಿರ್ಮಿಸುತ್ತಿರುವ “ನನ್ನ
ದುನಿಯಾ ಚಿತ್ರದ ಮುಹೂರ್ತ ಸಮಾರಂಭ ಕಳೆದವಾರ ಮೋದಿ ಆಸ್ಪತ್ರೆ ಬಳಿಯ ವರಸಿದ್ದಿ ವಿನಾಯಕ ಲಕ್ಷಿ¾àವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಾಗರಭಾವಿ ಬಿಬಿಎಂಪಿ ಸದಸ್ಯರಾದ ಮೋಹನ್ ಕುಮಾರ್ ಆರಂಭ ಪಲಕ ತೋರಿದರು.
ಮಂಗಳಮುಖೀಯೊಬ್ಬರು ಕ್ಯಾಮೆರಾ ಚಾಲನೆ ಮಾಡಿದರು. ಕೆ.ಹೆಚ್.ಮೂರ್ತಿಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡುತ್ತಿದ್ದಾರೆ. ರಾಜ್ಪ್ರದೀಪ್ ಗಾಂಧಿ ಛಾಯಾಗ್ರಹಣ ಹಾಗೂ ಹ್ಯಾರಿಸ್ ಜಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಹಿಂದೆ ಕೊಳ್ಳೆಗಾಲ ಚಿತ್ರದಲ್ಲಿ ಅಭಿನಯಿಸಿದ್ದ ಕಿರಣ್ ಗೌಡ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ರಚನಾ ದಸರಥ್. ರಮೇಶ್ಭಟ್, ಗೋಪಾಲಕೃಷ್ಣ ಗಡೇನಹಳ್ಳಿ, ಲಕ್ಷ್ಮಣ್, ಮೈಸೂರು ರಮಾನಂದ್, ಕಿಲ್ಲರ್ ವೆಂಕಟೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಬೆಂಗಳೂರು, ಮಾಗಡಿ ತಾಲ್ಲೂಕಿನ ಹೊಸೂರು, ಕಾವಲಪಾಳ್ಯ ಗ್ರಾಮ, ಮೈಸೂರು, ಮಡಿಕೇರಿ, ಸುಳ್ಯ, ಶಿರಸಿ, ಪುತ್ತೂರು ಮುಂತಾದ ಕಡೆ ಚಿತ್ರಕ್ಕೆ ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ.
-ಉದಯವಾಣಿ
Comments are closed.