ಮನೋರಂಜನೆ

ಜೋಗಿ ಗುಡ್ಡದ ನಿಕಿತಾ

Pinterest LinkedIn Tumblr

nikithaಈಕೆ ಚಿತ್ರರಂಗದ ಹೊಸ ನಿಕಿತಾ. ಪೂರ್ತಿ ಹೆಸರು ನಿಕಿತಾ ನಾರಾಯಣ್. ಕನ್ನಡದವರೇ ಆದರೂ ಸದ್ಯ ಹೈದರಾಬಾದ್‍ನಲ್ಲಿ ನೆಲೆಯೂರಿರುವ ನವತಾರೆ. ಟಾಲಿವುಡ್‍ನಲ್ಲಿ ಒಂದು ಅವರೇಜ್ ಸಕ್ಸಸ್‍ನಲ್ಲಿರುವ ಈ ನಟಿ, ಚಿತ್ರದುರ್ಗದ ಜೋಗಿ ಗುಡ್ಡವೇರಲು ಬಂದಿದ್ದಾರೆ.

ಅರ್ಥಾತ್, ನಾಗಚಂದ್ರ ನಿರ್ದೇಶಿಸುತ್ತಿರುವ ‘ಜೋಗಿ ಗುಡ್ಡ’ ಚಿತ್ರಕ್ಕೆ ಈಕೆಯೇ ನಾಯಕಿ. ನಟ ಧರ್ಮ ಕೀರ್ತಿರಾಜ್ ಈ ಚಿತ್ರದ ನಾಯಕ. ಉದಯ್ ಫಿಲ್ಮಿ ಬ್ಯಾನರ್‍ನಡಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸದ್ಯದಲ್ಲೇ ಮುಹೂರ್ತ ನಡೆಯಲಿದ್ದು, ಕೋಟೆಯ ನಾಡು ಚಿತ್ರದುರ್ಗದ ಬೆಟ್ಟದ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ವಿಶೇಷ ಅಂದರೆ ‘ಜೋಗಿ ಗುಡ್ಡ’ದಲ್ಲಿ ನಡೆದ ನೈಜ ಘಟನೆಯೊಂದನ್ನು ಈ ಚಿತ್ರಕ್ಕಾಗಿ ಬಳಸಿಕೊಳ್ಳುವ ಮೂಲಕ ನಿರ್ದೇಶಕ ನಾಗಚಂದ್ರ, ಚಿತ್ರಕಥೆಯಲ್ಲಿ ಕುತೂಹಲ ಮೂಡಿಸುವುದಕ್ಕೆ ಹೊರಟಿದ್ದಾರೆ.

ನಿಕಿತಾ ಗಾಂಧಿನಗರಕ್ಕೆ ಬಂದಿದ್ದು, ನಟ ಶ್ರೀನಗರಕಿಟ್ಟಿ ಅಭಿನಯದ ‘ಗೀತಾಂಜಲಿ’ ಚಿತ್ರಕ್ಕಾಗಿ. ರಾಜಶೇಖರ್ ಎಂಬುವವರು ನಿರ್ದೇಶನದ ಈ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಕನ್ನಡಕ್ಕೆ ಬಂದರೂ ಆ ಚಿತ್ರ ಸದ್ಯಕ್ಕೆ ಟೇಕ್ ಆಫ್ ಆಗಿಲ್ಲ. ಈ ನಡುವೆ ‘ಸಾಧು’ ಎನ್ನುವ ಚಿತ್ರದಲ್ಲೂ ನಿಕಿತಾ ನಟಿಸುತ್ತಿದ್ದು, ಅದು ಇನ್ನೂ ಚಿತ್ರೀಕರಣದ ಹಂತದಲ್ಲೇ ಇದೆ. ಒಟ್ಟಿನಲ್ಲಿ ಮೊದಲ ಚಿತ್ರ ಕೈ ಕೊಟ್ಟರೂ ನಿಕಿತಾ ನಾರಾಯಣ್‍ರನ್ನು ಗಾಂಧಿನಗರ ಕೈ ಬಿಟ್ಟಿಲ್ಲ ಎನ್ನುವುದಕ್ಕೆ ‘ಸಾಧು’ ಹಾಗೂ ‘ಜೋಗಿ ಗುಡ್ಡ’ ಚಿತ್ರಗಳೇ ಸಾಕ್ಷಿ.

Write A Comment