ಮನೋರಂಜನೆ

ಈ ನಟನಿಗೆ ನೆರವು ನೀಡಿದ್ದಾರೆ ಕಿಚ್ಚ ಸುದೀಪ್

Pinterest LinkedIn Tumblr

1085Sudeeb_120515Tಸ್ಯಾಂಡಲ್ ವುಡ್ ನ ಖ್ಯಾತ ನಟ ಕಿಚ್ಚ ಸುದೀಪ್ ಇತರರಲ್ಲಿರುವ ಪ್ರತಿಭೆ ಗುರುತಿಸುವುದರಲ್ಲಿ ಎಕ್ಸ್ ಪರ್ಟ್ ಎಂಬುದು ಈಗಾಗಲೇ ಸಾಬೀತಾಗಿದೆ. ಅಭಿನಯಕ್ಕೆ ಸೀಮಿತರಾಗಿದ್ದ ನಂದಕಿಶೋರ್ ಅವರ ಪ್ರತಿಭೆ ಗುರುತಿಸಿ ಸುದೀಪ್ ನೀಡಿದ್ದ ಸಲಹೆ ಇಂದು ಅವರನ್ನು ಖ್ಯಾತ ನಿರ್ದೇಶಕರನ್ನಾಗಿಸಿದೆ.

ಈ ಸಾಲಿನಲ್ಲಿ ಇನ್ನೂ ಹಲವರಿದ್ದು ಇದೀಗ ಸುದೀಪ್, ನಿರೂಪಣಾ ಕ್ಷೇತ್ರದಿಂದ ನಟನೆಯತ್ತ ಮುಖ ಮಾಡಿದ್ದ ರಾಹುಲ್ ಅವರಿಗೆ ತಮಿಳು ಚಿತ್ರವೊಂದನ್ನು ರಿಮೇಕ್ ಮಾಡುವಂತೆ ಸೂಚಿಸಿದ್ದಾರಲ್ಲದೇ ಈ ಚಿತ್ರವನ್ನು ತಮ್ಮ ಬ್ಯಾನರ್ ನಲ್ಲಿಯೇ ನಿರ್ಮಿಸುತ್ತಿದ್ದಾರೆ. ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ರಾಹುಲ್ ಈಗ ಅಭಿನಯಿಸುತ್ತಿದ್ದಾರೆ.

ರಾಹುಲ್, ಧನುಷ್ ಅಭಿನಯದ ಚಿತ್ರವೊಂದನ್ನು ರಿಮೇಕ್ ಮಾಡಲು ಯೋಚಿಸಿದ್ದರಂತೆ. ಆದರೆ ಕಿಚ್ಚ ಸುದೀಪ್ ಆ ಚಿತ್ರದ ಬದಲು ತಮಿಳಿನ ಮತ್ತೊಂದು ಚಿತ್ರ ‘ಜಿಗರ್ಥಂಡಾ’ ಮಾಡಲು ಸಲಹೆ ನೀಡಿದರೆಂದು ಹೇಳಲಾಗಿದೆ. ನಟನಾ ಕ್ಷೇತ್ರದಲ್ಲಿ ಇನ್ನೂ ಪರಿಪೂರ್ಣವಾಗಿ ತೊಡಗಿಸಿಕೊಳ್ಳಲಾಗದ ರಾಹುಲ್ ತಮ್ಮ ಹೊಸ ಚಿತ್ರದ ಕುರಿತು ಆಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

Write A Comment