ಮನೋರಂಜನೆ

ಒಂದಂಕಿ ಲಾಟರಿ ಕಿಂಗ್ ಪಿನ್ ಜೊತೆ ಸಿನಿಮಾ ನಿರ್ಮಾಪಕರ ನಂಟು

Pinterest LinkedIn Tumblr

Lottary

ಬೆಂಗಳೂರು, ಮೇ 28- ಅಕ್ರಮ ಲಾಟರಿ ಪ್ರಕರಣದ ಪ್ರಮುಖ ರೂವಾರಿ ಪಾರಿರಾಜನ್‌ಗೆ ಕನ್ನಡ ಚಲನಚಿತ್ರದ ಕೆಲವು ನಿರ್ಮಾಪಕರ ನಂಟು ಇರುವುದು ಸಿಐಡಿ ತನಿಖೆಯಿದ ಬೆಳಕಿಗೆ ಬಂದಿದೆ. ಕಡಿಮೆ ಬಜೆಟ್‌ನ ಚಿತ್ರ ನಿರ್ಮಾಣ ಮಾಡುತ್ತಿದ್ದ ನಿರ್ಮಾಪಕರು ಹಾಗೂ ಧಾರಾವಾಹಿ ನಿರ್ಮಾಪಕರಿಗೂ ಈತ ಹಣ

ನೀಡಿದ್ದ ಎಂಬುದನ್ನು ಸಿಐಡಿ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ. ಎರಡರಿಂದ ಐದು ಕೋಟಿವರೆಗೂ ಚಿತ್ರ ನಿರ್ಮಾಪಕರಿಗೆ ಪಾರಿರಾಜನ್ ಶೇ.5ರಿಂದ 8ರ ವರೆಗೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದ ಎನ್ನಲಾಗಿದೆ. ಈತನಿಂದ ಸಾಲ ಪಡೆದಿದ್ದ ಅನೇಕ ನಿರ್ಮಾಪಕರು ಇದೀಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಯಾವಾಗ ಸಿಬಿಐ ತನಿಖಾ ತಂಡ ತಮ್ಮ ಮನೆ ಬಾಗಿಲನ್ನು ತಟ್ಟಬಹುದೆಂಬ ಭೀತಿ ನಿರ್ಮಾಪಕರಿಗೆ ಆವರಿಸಿದೆ.
ಮೂಲತಃ ತಮಿಳುನಾಡಿನವನಾದ ಪಾರಿರಾಜನ್ ಹೊಟ್ಟೆಪಾಡಿಗಾಗಿ ಕೆಜಿಎಫ್‌ಗೆ ಬಂದ ನಂತರ ಅಕ್ರಮ ಲಾಟರಿಯಲ್ಲಿ ತೊಡಗಿಸಿಕೊಂಡಿದ್ದ. ಈತನಿಗೆ ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳು ಪರಿಚಯವಾಗುತ್ತಿದ್ದಂತೆ ತನ್ನ ಕಬಂದ ಬಾಹುವನ್ನು ಬೆಂಗಳೂರಿಗೆ ವಿಸ್ತರಿಸಲು ಮುಂದಾದ.

ಬೆಂಗಳೂರಿಗೆ ಬಂದ ಈತ ರಹಸ್ಯವಾಗಿ ಫ್ಲಾಟ್‌ವೊಂದರಲ್ಲಿ ತನ್ನ ವಹಿವಾಟು ನಡೆಸುತ್ತಿದ್ದ. ಪೊಲೀಸ್ ಅಧಿಕಾರಿಗಳು ಪರಿಚಯವಾದ ನಂತರ ಪಾರಿರಾಜನ್‌ಗೆ ಚಿತ್ರರಂಗದ ನಿರ್ಮಾಪಕರ ಸ್ನೇಹ ಬೆಳೆಯಿತು.  ಪಾರಿರಾಜನ್ ಬಳಿ ಹಣವಿದೆ ಎಂಬುದನ್ನು ಅರಿತ ಕೆಲ ನಿರ್ಮಾಪಕರು ಈತನಿಂದ ಸಾಲ ಪಡೆದಿದ್ದರು. ತಾನು ಯಾವ ಯಾವ ನಿರ್ಮಾಪಕರಿಗೆ ಹಣ ನೀಡಿದ್ದೆ, ಇದು ಎಷ್ಟು ಮೊತ್ತದಲ್ಲಿದೆ ಎಂಬುದನ್ನು ತನ್ನ ದಿನಚರಿ (ಡೈರಿ)ಯಲ್ಲಿ ಬರೆದಿಟ್ಟಿದ್ದಾನೆಂದು ಮೂಲಗಳು ತಿಳಿಸಿವೆ. ಇದೀಗ ಪರಪ್ಪನ ಅಗ್ರಹಾರದಲ್ಲಿರುವ ಪಾರಿರಾಜನ್ ಸಿಐಡಿ ಅಧಿಕಾರಿಗಳ ಮುಂದೆ ಈ ಎಲ್ಲ ವಿವರಗಳನ್ನೂ ಬಾಯಿಬಿಟ್ಟಿದ್ದಾನೆ. ಈತನಿಂದ ಸಾಲ ಪಡೆದವರು ಹೆಗಲ ಮೇಲೆ ಶನಿ ಏರಿತು ಎಂದು ಪರಿತಪಿಸುತ್ತಿದ್ದಾರೆ.

Write A Comment