ಬಾಲಿವುಡ್ ನಲ್ಲಿ ತಮ್ಮ ಅಭಿನಯದ ಮೂಲಕ ಸಾಕಷ್ಟು ಖ್ಯಾತರಾಗಿರುವ ರಣಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾ ಥಿಯೇಟರ್ ನಿಂದ ಹೊರ ದಬ್ಬಿಸಿಕೊಂಡಿದ್ದಾರೆ. ಅರೆ ! ಇದೇನು ಕಿರಿಕ್ ಅಂತೀರಾ ಈ ಸ್ಟೋರಿ ಓದಿ.
ಹೌದು. ಬಾರೀ ನಿರೀಕ್ಷೆ ಮೂಡಿಸಿದ್ದ ಅನುರಾಗ್ ಕಶ್ಯಪ್ ನಿರ್ದೇಶನದ ‘ಬಾಂಬೆ ವೆಲ್ವೆಟ್’ ಚಿತ್ರ ಮೇ.15ರಂದು ತೆರೆಕಂಡಿದ್ದು ಸಖತ್ ಗಳಿಕೆ ಕಾಣಬಹುದು ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾರಂತ ಸ್ಟಾರ್ಗಳಿದ್ದರೂ ನಿರೀಕ್ಷೆಯಂತೆ ಚಿತ್ರ ಬಿಡುಗಡೆಯ ದಿನದಂದು ಹೇಳಿಕೊಳ್ಳುವಂತಹ ಯಶಸ್ಸು ಕಾಣದ ಕಾರಣ ಬಹುತೇಕ ಮುಂಬೈ ಚಿತ್ರಮಂದಿರದಿಂದ ಈ ಚಿತ್ರವನ್ನು ಹೊರಹಾಕಲಾಗಿದೆ.
ಇದರ ನಡುವೆ ತನು ವೆಡ್ಸ್ ಮನು ರಿಟರ್ನ್ಸ್ ಮೊದಲ ವಾರದಲ್ಲೇ 38 ಕೋಟಿ ಆದಾಯಗಳಿಸಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲ, ‘ಪಿಕು’ ಸಹ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದು ಹೀಗಾಗಿ ಈ ಪೈಪೋಟಿ ಎದುರಿಸಲಾಗದ ‘ಬಾಂಬೆ ವೆಲ್ವೆಟ್’ ಗಳಿಕೆಯಲ್ಲಿ ಹಿಂದೆ ಉಳಿದಿದ್ದು ಕೆಲವೇ ಕೆಲವು ಕಡೆ ಜನರು ಬಂದರೂ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಕೆಲವೊಂದು ಕಡೆ ಪ್ರದರ್ಶನ ನಡೆಯುತ್ತಿದೆ.
ಈ ವರ್ಷದ ಅತಿ ನಿರೀಕ್ಷಿತ ಚಿತ್ರ ಅನ್ನಿಸಿಕೊಂಡಿದ್ದ ‘ಬಾಂಬೆ ವೆಲ್ವೆಟ್’ ಚಿತ್ರ ಬೋರಲಾಗಿ ಬಿದ್ದಿರುವುದು ವಿತರಕರಿಗೆ ಭಾರಿ ನಷ್ಟತಂದಿದೆ ಎನ್ನಲಾಗುತ್ತಿದ್ದು ‘ಬಾಂಬೆ ವೆಲ್ವೆಟ್’ ಮುಂಬೈನ ಕೆಲ ಥಿಯೇಟರ್ನಿಂದ ಹೊರಗೆ ಬಂದಿರುವುದು ವಿತರಕರಿಗಷ್ಟೆ ಅಲ್ಲದೇ ರಣಬೀರ್ ಕಪೂರ್ ಮತ್ತು ಅನುಷ್ಕಾ ಸಹ ಕಂಗಾಲಾಗುವಂತೆ ಮಾಡಿದ್ದಂತೂ ಸತ್ಯ.