ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಹೊತ್ತು ತರುತ್ತಿದ್ದ ವಿಮಾನ ಶುಕ್ರವಾರ ಮುಂಜಾನೆ ಛತ್ತಿಸ್ಗಢ್ನ ರಾಯ್ಪುರ್ ವಿಮಾನ ನಿಲ್ದಾಣದಲ್ಲಿ ಪೈಲಟ್ನ ಅಚಾತುರ್ಯದಿಂದ ನಡೆಯಲಿದ್ದ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಹೌದು. ರಾಯ್ಪುರ್ನ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಇದ್ದ ವಿಮಾನ ಪ್ರತಿದಿನ ಆಗಮಿಸುವ ಕೊಲ್ಕತ್ತಾ-ರಾಯ್ಪುರ್ ವಿಮಾನ ರನ್ವೇನಲ್ಲಿ ನಿಂತಿತ್ತು. ಆದರೆ ಇದನ್ನು ಗಮನಿಸದ ಇಂಡಿಗೋ ವಿಮಾನದ ಪೈಲೆಟ್ ವಿಮಾನ ರನ್ ವೇಯಲ್ಲಿ ಇಳಿಸಲು ಮುಂದಾಗಿದ್ದು ತಕ್ಷಣ ಇದನ್ನು ಗಮನಿಸಿದ ಹಿರಿಯ ಪೈಲೆಟ್ಗಳು ವಿಮಾನವನ್ನು ಸ್ವಲ್ಪ ದೂರದಲ್ಲಿ ಸುರಕ್ಷಿತವಾಗಿ ರನ್ವೇಗೆ ಇಳಿಸಿ ಆಗಲಿರುವ ಭಾರೀ ದುರಂತವನ್ನು ತಪ್ಪಿಸಿದ್ದಾರೆ.
ಈ ವಿಮಾನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ನ ಎಲ್ಲಾ ಆಟಗಾರರು ಇದ್ದರೆನ್ನಲಾಗಿದ್ದು ಮೇ 09 ಮತ್ತು 12ರಂದು ರಾಯ್ಪುರ್ನ ಶಾಹೀದ್ ವೀರನಾರಾಯಣ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ತಮ್ಮ ಮುಂದಿನ ಐಪಿಎಲ್ ಪಂದ್ಯಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಹಿರಿಯ ಪೈಲೆಟ್ಗಳ ಕರ್ತವ್ಯ ಪ್ರಜ್ಞೆಯಿಂದ ಈ ವಿಮಾನ ದುರಂತವಂದು ತಪ್ಪಿದ್ದು, ಡೇರ್ ಡೆವಿಲ್ಸ್ ತಂಡದ ಸದಸ್ಯರು ಬಚಾವಾಗಿದ್ದಾರೆ.