ಇತ್ತೀಚೆಗಷ್ಟೇ ವಿವಾಹ ಸಂಬಂಧವನ್ನು ಮುರಿದುಕೊಂಡಿದ್ದಾಳೆ ಎನ್ನಲಾದ ದಕ್ಷಿಣ ಭಾರತದ ಗ್ಲಾಮರಸ್ ಬೆಡಗಿ ತ್ರಿಷಾ ಅವಕಾಶ ಸಿಗುವುದಾದರೆ ‘ಮುತ್ತು’ ಕೊಡಲು ಸಿದ್ದ ಎನ್ನುವ ಮೂಲಕ ಅಚ್ಚರಿಗೆ ಕಾರಣಳಾಗಿದ್ದಾಳೆ.
ಉದ್ಯಮಿ ವರುಣ್ ಮಣಿಯನ್ ಜತೆಗಿನ ನಿಶ್ಚಿತಾರ್ಥ ರದ್ದಾಗಿದೆ ಎಂಬ ಮಾತು ಕೇಳಿ ಬರುತ್ತಿದ್ದಂತೆ ತೆಲುಗು ಹಾಗೂ ತಮಿಳು ಚಿತ್ರಗಳ ನಿರ್ಮಾಪಕರು ತ್ರಿಷಾಳ ಮನೆ ಬಾಗಿಲನ್ನು ತಟ್ಟುತ್ತಿದ್ದು ಆಕೆಯ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ. ಅದರಲ್ಲಿಯೂ ಸಿಕ್ಕ ವಕಾಶವನ್ನು ಕೈಬಿಡ ಬಾರದು ಎನ್ನುವ ಲಾಜಿಕ್ ನಲ್ಲಿರುವ ತ್ರಿಷಾ ಲಿಪ್ ಲಾಕ್ ಸೀನ್ ಗಳಲ್ಲಿ ನಟಿಸಲು ‘ಎಸ್’ ಎಂದಿದ್ದಾಳಂತೆ.
ಭೂಲೋಕಂ, ಅಪ್ಪಾಟಕ್ಕರ್, ಲಯನ್ ಚಿತ್ರಗಳ ಬಳಿಕ ಆಕೆ ಸೆಲ್ವ ರಾಘವನ್ ಅವರ ನಿರ್ದೇಶನದಲ್ಲಿ ಸಿಂಬು ಜೊತೆ ಅಭಿನಯಿಸುತ್ತಿರುವ ತ್ರಿಷಾ ಕಮಲ್ ಹಾಸನ್ ಅವರ ಜೊತೆಗೂ ಸಹಿತ ನಟಿಸಲು ಆಕೆಯ ಕಡೆಯಿಂದ ಸಮ್ಮತಿಸಿದ್ದಾಳೆ ಎನ್ನಲಾಗಿದ್ದು ಇದರಲ್ಲಿ ತನ್ನ ಮುತ್ತಿನ ಸೀನ್ ಮೂಲಕವೇ ಅಭಿಮಾನಿಗಳ ಮನ ಗೆಲ್ಲಲಿದ್ದಾಳೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಮದುವೆಯಾಗುವ ತೀರ್ಮಾನ ತೆಗೆದುಕೊಂಡಿದ್ದ ತ್ರಿಷಾ ಇದೀಗ ಹಸೆಮಣೆ ಏರುವುದನ್ನು ಬಿಟ್ಟು ಮುತ್ತಿನ ಮತ್ತನ್ನು ಪ್ರದರ್ಶಿಸಲು ಹೊರಟಿರುವುದು ಮಾತ್ರ ಆಕೆಯ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.