ಏಪ್ರಿಲ್ 25 ರಂದು ನೇಪಾಳದಲ್ಲಿ ಸಂಭವಿಸಿದ ವಿಧ್ವಂಸಕ ಭೂಕಂಪ ಬಾರಿಸಿದ ಮರಣ ಮೃದಂಗಕ್ಕೆ ಸಾವಿರಾರು ಜೀವಗಳು ಬಲಿಯಾಗಿ, ಸಾವಿರಾರು ಜನ ಗಾಯಗೊಂಡು, ಶೇ.90ರಷ್ಟು ಮನೆಮಠಗಳೆಲ್ಲ ನಾಶವಾಗಿ, ರಾಜಧಾನಿ ಕಠ್ಮಂಡು ಸೇರಿದಂತೆ ವಿವಿಧೆಡೆ ಅಕ್ಷರಶಃ ಸ್ಮಶಾನವೇ ಸೃಷ್ಟಿಯಾಗಿ ಎಲ್ಲೆಲ್ಲೂ ಕೊಳೆತ ಶವಗಳ ರಾಶಿ, ಗಾಯಾಳುಗಳ ಆಕ್ರಂದನ, ಅನ್ನ- ನೀರಿ ಗಾಗಿ ಸಾವಿರ ಸಾವಿರ ಸಂಖ್ಯೆಯ ನಿರಾಶ್ರಿತರ ಆರ್ತನಾದಗಳನ್ನು ಕಂಡು ಯಾರಿಗೆ ತಾನೇ ಕರುಳಿರಿಯುವುದಿಲ್ಲ ಹೇಳಿ.
ಅದರಲ್ಲಿ ಬಾಲಿವುಡ್ನ ಮಿ.ಪರ್ಫೆಕ್ಟ್ (ಅಮೀರ್ಖಾನ್) ಅಂದ್ರೆ ಕೇಳಬೇಕೇ… ಆ ಪುಣ್ಯಾತ್ಮ ರುದ್ರ ಭೀಕರ ದೃಶ್ಯ ಕಂಡು ಗಳಗಳ ಅತ್ತು ಬಿಟ್ಟನಂತೆ. ಭೂಕಂಪಗ್ರಸ್ಥ ನೇಪಾಳದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಮೇಲೇರುತ್ತಿದ್ದಂತೆ ಅದಕ್ಕಾಗಿ ಈ ನಟನ ಹೃದಯ ಮಮ್ಮಲ ಮರುಗಿದನಂತೆ. ನೇಪಾಳದಲ್ಲಿ ಪ್ರಕೃತಿ ವಿಕೋಪದಿಂದುಂಟಾದ ವಿನಾಶದಲ್ಲಿ ಅಳಿದುಳಿದ ಅನಾಥಮಕ್ಕಳ ಯೋಗಕ್ಷೇಮಕ್ಕಾಗಿ ದೇಣಿಗೆ ನೀಡುವಂತೆ ಸಾರ್ವ ಜನಿಕಬರಲ್ಲಿ ಮನವಿ ಮಾಡಿದ್ದಾರೆ.
ಅಮೀರ್ ಖಾನ್ ಇತ್ತೀಚೆಗೆ ‘ಸತ್ಯಮೇವ ಜಯತೇ’ ಟಿವಿ ಶೋ ಕಾರ್ಯಕ್ರಮದ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿರುವ ಅಮೀರ್ ನೇಪಾಳಿಗರ ಬದುಕಿಗೆ ಆಸರೆ ನೀಡುವಂತೆ ಟ್ವೀಟ್ ಮೂಲಕ ಜನತೆಯಲ್ಲಿ ವಿನಂತಿಸಿದ್ದಾರೆ.