ಭಾರತ ಕ್ರಿಕೆಟ್ ತಂಡದ ಬಿರುಸಿನ ಆಟಗಾರಎಂದೇ ಕರೆಯಿಸಿಕೊಳ್ಳುವ ಯುವರಾಜ್ ಸಿಂಗ್ ಅವರಿಗೆ ವಿವಾದವೊಂದು ಸುತ್ತಿಕೊಂಡಿದ್ದು ಯುವರಾಜ್ ಸಿಂಗ್ ಅವರ ಆಟದ ಬಗೆಗೆ ಅನುಮಾನ ಮೂಡಲು ಕಾರಣವಾಗಿದೆ.
ಹೌದು. ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಗೆ ಶಂಕಿತ ಬುಕ್ಕಿ ಕರಣ್ ಗಿಲ್ಹೋತ್ರ ಜತೆ ಸಂಪರ್ಕವಿದೆಯೆಂದು ಐಸಿಸಿ ಚೇರ್ಮನ್ ಎನ್. ಶ್ರೀನಿವಾಸನ್ ಆರೋಪಿಸಿದ್ದು ಈ ನಡುವೆಯೇ ಯುವರಾಜ್ ಸಿಂಗ್ ಅವರು ಗಿಲ್ಹೋತ್ರ ಜತೆ ಪೋಸು ನೀಡಿರುವ ಚಿತ್ರ ವೆಬ್ಸೈಟ್ನಲ್ಲಿ ಹರಿದಾಡುತ್ತಿರುವುದು ಅಚ್ಚರಿ ಮೂಡಿಸಿದೆ.
ಆದರೆ ಗಿಲ್ಹೋತ್ರ ಅವರ ಜತೆ, ಬಾಲಿವುಡ್ ನಟ ಸಲ್ಮಾನ್ ಖಾನ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಟೀಮ್ಇಂಡಿಯಾ ನಾಯಕ ಎಂ.ಎಸ್ ಧೋನಿ ಕೂಡ ಪೋಸ್ ನೀಡಿದ್ದು ಹಾಗಾಗಿ ಈ ಫೋಟೋಗಳಿಗೂ ಬೆಟ್ಟಿಂಗ್ ಗೂ ಯಾವುದೇ ಸಂಬಂಧವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಈಗಾಗಲೇ ತಮ್ಮ ಮೇಲೆ ಬಂದಿರುವ ಆರೋಪದ ಬಗೆಗೆ ಗಿಲ್ಹೋತ್ರ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ ವೇಳೆ ನಾನು ಕ್ರೀಡಾಂಗಣದಲ್ಲಿ ಹಾಜರಿದ್ದದ್ದು ಹೌದು. ಆದರೆ ಬೆಟ್ಟಿಂಗ್-ಫಿಕ್ಸಿಂಗ್ ಬಗ್ಗೆ ನನಗೇನೂ ಗೊತ್ತಿಲ್ಲ. ಅನುರಾಗ್ ಹೆಸರು ಕೆಡಿಸಲು ಐಸಿಸಿ ಪ್ರಯತ್ನಿಸುತ್ತಿದ್ದು ನನ್ನ ವಿರುದ್ಧ ಏನಾದರೂ ಸಾಕ್ಷ್ಯವಿದ್ದರೆ ಐಸಿಸಿ ನೀಡಲಿ ಎಂದು ಸವಾಲೆಸೆದಿದ್ದಾರೆ.
-ಕೃಪೆ: ಕನ್ನಡ ದುನಿಯಾ