ಮನೋರಂಜನೆ

ರಜನಿಕಾಂತ್ ನಡೆಯನ್ನು ಆಕ್ಷೇಪಿಸಿದ ಕಮಲ್ ಹಾಸನ್

Pinterest LinkedIn Tumblr

rajani

ಚೆನ್ನೈ: ತಮ್ಮ ಅಭಿನಯದ ‘ಲಿಂಗಾ’ ಚಿತ್ರದ ವಿತರಣೆ ಹಕ್ಕು ಪಡೆದು ನಷ್ಟ ಅನುಭವಿಸಿದ ವಿತರಕರಿಗೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ 10 ಕೋಟಿ ರೂ. ಪರಿಹಾರ ನೀಡಿರುವುದಕ್ಕೆ ಮತ್ತೊಬ್ಬ ಖ್ಯಾತ ನಟ ಕಮಲ್ ಹಾಸನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಇತ್ತೀಚೆಗೆ ವಿತರಕರು ಚಿತ್ರ ನಷ್ಟ ಅನುಭವಿಸಿದಾಗ ನಿರ್ಮಾಪಕ ಹಾಗೂ ನಟರಿಂದ ಪರಿಹಾರ ಕೇಳುವ ಪರಿಪಾಠ ಹೆಚ್ಚಾಗುತ್ತಿದೆ. ಚಿತ್ರದ ಹಕ್ಕು ಪಡೆಯುವ ವಿತರಕರು ಒಂದು ವೇಳೆ ಲಾಭ ಗಳಿಸಿದರೆ ನಿರ್ಮಾಪಕ ಹಾಗೂ ನಟರಿಗೆ ಹಣವನ್ನೇನೂ ನೀಡುವುದಿಲ್ಲವೆಂದಿದ್ದಾರೆ.

‘ಲಿಂಗಾ’ ಚಿತ್ರದ ವಿತರಣೆ ಹಕ್ಕು ಪಡೆದು ತಾವು ಆಪಾರ ನಷ್ಟ ಅನುಭವಿಸಿರುವುದಾಗಿ ಹೇಳಿದ್ದ ವಿತರಕರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ನಟ ರಜನಿಕಾಂತ್ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಚೆನ್ನೈನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಲ್ಲದೇ ಇಷ್ಟು ದಿನವಾದರೂ ಪರಿಹಾರ ಬಂದಿಲ್ಲವೆಂದು ಹೇಳಿ ರಜನಿಕಾಂತ್ ಅವರ ಚೆನ್ನೈನ ಪೋಯಸ್ ಗಾರ್ಡನ್ ನಿವಾಸದ ಎದುರು ಭಿಕ್ಷಾ ಪಾತ್ರೆ ಹಿಡಿದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಈ ವೇಳೆ ರಜನಿಕಾಂತ್ 10 ಕೋಟಿ ರೂ. ಹಣವನ್ನು ವಿತರಕರಿಗೆ ಪರಿಹಾರವಾಗಿ ಹಿಂದಿರುಗಿಸಿದ್ದರು.

Write A Comment