ಮೆಲ್ಬೋರ್ನ್, ಡಿ.25: ‘‘ವಿರಾಟ್ ಅವರು ಚೂರಿಯಿಂದ ಧವನ್ಗೆ ಇರಿದಿದ್ದರು. ಧವನ್ ಗಾಯದಿಂದ ಚೇತರಿಸಿಕೊಂಡ ನಂತರ ಅವರನ್ನು ಬ್ಯಾಟಿಂಗ್ಗೆ ಕಳುಹಿಸಲಾಗಿತ್ತು ಎಂದು ತಮಾಷೆ ಮಾಡಿದ ಧೋನಿ, ಈ ಕತೆಯನ್ನು ವಾರ್ನರ್ ಬ್ರದರ್ಸ್ಗೆ ಸಿನೆಮಾ ಮಾಡಬಹುದು. ಈ ಕತೆ ಹೇಗೆ ಸೃಷ್ಟಿಯಾಯಿತು ಎಂದು ನನಗೆ ಗೊತ್ತಾಗುತ್ತಿಲ್ಲ’’ ಎಂದು ಹೇಳಿದ್ದಾರೆ.
ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿ ಉಪ ನಾಯಕ ವಿರಾಟ್ ಕೊಹ್ಲಿ ಹಾಗೂ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ವಾಗ್ವಾದ ನಡೆಸಿದ್ದರು ಎಂಬ ವರದಿಯನ್ನು ತಳ್ಳಿ ಹಾಕಿರುವ ನಾಯಕ ಎಂಎಸ್ ಧೋನಿ ಮಾಧ್ಯಮಗಳು ರಚಿಸಿರುವ ಈ ಕತೆಯನ್ನು ವಾರ್ನರ್ ಬ್ರದರ್ಸ್ ಒಂದು ಸಿನೆಮಾವನ್ನಾಗಿ ಮಾಡಬಹುದು ಎಂದು ತಮಾಷೆ ಮಾಡಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ಗೆ ಮುನ್ನಾದಿನ ಎಂಸಿಜಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಡ್ರೆಸ್ಸಿಂಗ್ರೂಮ್ನಲ್ಲಿ ಅಹಿತಕರ ಘಟನೆ ನಡೆದಿತ್ತು ಎಂಬ ವರದಿಯನ್ನು ನಿರಾಕರಿಸಿದ ಧೋನಿ, ‘‘ಭಾರತದ ಡ್ರೆಸ್ಸಿಂಗ್ರೂಮ್ನಲ್ಲಿ ಅಶಾಂತಿಯಿಲ್ಲ. ತಂಡ ಎಲ್ಲಿಗೇ ತೆರಳಿದರೂ ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತದೆ. ಕೆಲವು ಪತ್ರಕರ್ತರು ತಮ್ಮದೆ ಆದ ಕತೆ ಬರೆದು ಮಾಧ್ಯಮಗಳಿಗೆ ನೀಡುತ್ತಾರೆ’’ ಎಂದು ಧೋನಿ ಕಿಡಿಕಾರಿದರು.