ಚೆನ್ನೈ: ನಿರ್ಮಾಪಕ, ಉದ್ಯಮಿ ವರುಣ್ ಮನಿಯನ್ ಅವರೊಡನೆ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ನಿಶ್ಚಿತಾರ್ಥವಾಗಿದ್ದು, ತ್ರಿಶಾ ಶೀಘ್ರದಲ್ಲೇ ಹಸೆಮಣೆ ಏರುವ ಸಿದ್ಧತೆಯಲ್ಲಿದ್ದಾರೆ ಎಂಬ ಗಾಳಿ ಮಾತಿಗೆ ತ್ರಿಶಾ ಗರಂ ಆಗಿದ್ದಾರೆ.
ಕನ್ನಡದಲ್ಲಿ ಬಿಡುಗಡೆಯಾದ ‘ಪವರ್’ ಚಿತ್ರದ ಯಶಸ್ಸಿನ ನಂತರ ಮತ್ತೆ ನಟನೆಯಲ್ಲಿ ಬ್ಯುಸಿಯಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ತ್ರೀಶಾ ಅವರಿಗೆ ನಿಶ್ಚಿತಾರ್ಥವಾಗಿದೆ ಎಂಬ ಗಾಳಿ ಮಾತನ್ನು ತ್ರಿಶಾ ತಳ್ಳಿ ಹಾಕಿದ್ದಾರೆ.
ನನಗೆ ನಿಶ್ಚಿತಾರ್ಥವಾಗಿಲ್ಲ. ಇದೊಂದು ವದಂತಿ ಎಂದು ಹೇಳುವ ಮೂಲಕ ಗಾಳಿ ಮಾತಿಗೆ ಎಳ್ಳುನೀರು ಬಿಟ್ಟಿದ್ದಾರೆ.
ತೆಲುಗು ಚಿತ್ರದಲ್ಲಿ ನಟ ಬಾಲಕೃಷ್ಣ ಅವರ ಜೋಡಿಯಾಗಿ ನಟಿಸುತ್ತಿರುವ ತ್ರೀಶಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಚಿತ್ರರಂಗದಲ್ಲಿ ತ್ರಿಶಾಗೆ ನಿಶ್ಚಿತಾರ್ಥವಾಗಿದೆ ಎಂಬ ಗಾಳಿ ಮಾತು ಹಬ್ಬಿದೆ. ನಿನ್ನೆಯಷ್ಟೇ ಟ್ವಿಟರ್ನಲ್ಲಿ ತ್ರಿಶಾ ಮತ್ತು ಉದ್ಯಮಿ ವರಣ್ ಮನಿಯನ್ ಜೊತೆ ನಿಶ್ಚಿತಾರ್ಥವಾಗಿದೆ ಎಂದು ಟ್ವೀಟ್ ಮಾಡಲಾಗಿತ್ತು.
ಇದಕ್ಕೆ ಗರಂ ಆಗಿರುವ ತ್ರಿಶಾ ನನಗೆ ನಿಶ್ಚಿತಾರ್ಥವಾಗಿಲ್ಲ. ಇದೆಲ್ಲಾ ಗಾಳಿ ಮಾತು ಎಂದು ಸ್ಪಷ್ಟನೆ ನೀಡಿದ್ದಾರೆ.
ತೆಲುಗು ನಟ ರಾಣಾ ಮತ್ತು ತ್ರಿಶಾ ನಡುವೆ ಸಮ್ಥಿಂಗ್ ಸಮ್ಥಿಂಗ್ ನಡೆಯುತ್ತಿದೆ ಎಂದು ಇಡೀ ಟಾಲಿವುಡ್ಗೆ ಗೊತ್ತಿತ್ತು. ಇತ್ತೀಚೆಗಷ್ಟೇ ಇವರಿಬ್ಬರ ನಡುವೆ ನಟಿ ರಾಗಿಣಿ ಎಂಟ್ರಿಕೊಟ್ಟಿದ್ದಾರೆ ಎಂಬ ವಿಷಯ ಹಬ್ಬುತ್ತಿದ್ದಂತೆ, ಇತ್ತ ತ್ರಿಶಾಗೆ ನಿಶ್ಚಿತಾರ್ಥವಾಗಿದೆ ಎಂಬ ವದಂತಿ ಹರಡಿದೆ.
Posted by: Mainashree
ಕನ್ನಡ ಮ್ಯಾಟ್ರಿಮೋನಿ – ಉಚಿತ