ಮುಂಬೈ, ಸೆ.14: ನನ್ನನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವುದಾಗಿ ಕೇಳಿದ್ದು, ಆ ಬಗ್ಗೆ ನಾನು ಚಿಂತನೆ ನಡೆಸಿದ್ದೇನೆ ಎಂದು ಬಾಲಿವುಡ್ ನಟ ಮಿ-ಪರ್ಫೆಕ್ಟ್ ಹೇಳಿದ್ದಾರೆ.
ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹಾಗೂ ಬಾಲಿವುಡ್ ನಟಿ ರೇಖಾ ಅವರನ್ನು ನಿಯೋಜಿಸಿದಂತೆ ನಿಮ್ಮನ್ನೂ ನಿಯೋಜನೆ ಮಾಡುವುದಕ್ಕೆ ನಿಮಗೆ ಇಷ್ಟವಿದೆಯೇ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಅವರೇನು ಮಾಡುತ್ತಿದ್ದಾರೆ ಎಂಬ ಬಗ್ಗೆ ನೋ ಕಾಮೆಂಟ್ ಎಂದರು. ಒಂದು ವೇಳೆ ನಾನು ರಾಜ್ಯಸಭೆಗೆ ನಾಮ ನಿರ್ದೇಶನಗೊಂಡರೆ ಆ ಮಟ್ಟದಲ್ಲಿ ನನ್ನ ಕೈಯಿಂದ ಆದ ಸೇವೆಯನ್ನು ಈ ಸಮಾಜಕ್ಕೆ ಮಾಡುವ ಬಯಕೆ ಹೊಂದಿದ್ದೇವೆ ಎಂದು ಅಮೀರ್ ಹೇಳಿದ್ದಾರೆ.