ಮುಂಬೈ

ಸರ್ಕಾರದ ವಿರುದ್ಧವೇ ಧ್ವನಿ ಎತ್ತಿರುವ ಕಂಗನಾರವರ ಧೈರ್ಯಕ್ಕೆ ಹ್ಯಾಟ್ಸ್ ಆಫ್,ಎಂದ ನಟ ವಿಶಾಲ್

Pinterest LinkedIn Tumblr

ಮುಂಬಯಿ: ಬಾಲಿವುಡ್‌ ನಟಿ ಕಂಗನಾ ರನೌತ್‌ ಮತ್ತು ಮಹಾರಾಷ್ಟ್ರದ ಆಢಳಿತ ಪಕ್ಷ ಶಿವಸೇನೆಯ ಮಾತಿನ ಯುದ್ಧ ನಡೆಯುತ್ತಿದ್ದು,ಈ ಕುರಿತು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ತಮಿಳುನಾಡಿನ ಖ್ಯಾತ ನಟ ವಿಶಾಲ್, ಕಂಗನಾ ಅವರ ಧೈರ್ಯವನ್ನು ಸ್ವಾತಂತ್ಯ್ರ ಹೋರಾಟಗಾರ ಭಗತ್‌ ಸಿಂಗ್‌ಗೆ ಹೋಲಿಕೆ ಮಾಡಿದ್ದಾರೆ. ಅಲ್ಲದೆ, ಸರ್ಕಾರದ ವಿರುದ್ಧವೇ ಧ್ವನಿ ಎತ್ತಿರುವ ಅವರ ಧೈರ್ಯಕ್ಕೆ ಪ್ರಶಂಶೆ ವ್ಯಕ್ತಪಡಿಸುವ ಜೊತೆಗೆ ಕಂಗನಾಗೆ ಬೆಂಬಲ ಸೂಚಿಸಿದ್ದಾರೆ.

ಈ ನಡುವೆ ಮುಂಬೈ ನ ಬಾಂದ್ರಾದಲ್ಲಿರುವ ಕಂಗನಾ ಕಚೇರಿ ಕಾನೂನು ಬಾಹೀರ ಎಂದು ಬಿಎಂಸು ಕಟ್ಟಡವನ್ನು ನೆಲಸಮ ಮಾಡಿತ್ತು. ನಟ ವಿಶಾಲ್ ಮಾಡಿರುವ ಟ್ವೀಟ್‌ನಲ್ಲಿ, ‘ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್ ಆಫ್, ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಧ್ವನಿ ನೀಡಲು ನೀವು ಎಂದಿಗೂ ಎರಡು ಬಾರಿ ಯೋಚಿಸಿಲ್ಲ. ಇದು ನಿಮ್ಮ ವೈಯಕ್ತಿಕ ಸಮಸ್ಯೆಯಲ್ಲ. ಆದರೆ ಆಗಲೂ ಸರ್ಕಾರದ ಕೋಪವನ್ನು ನೀವು ಎದುರಿಸುತ್ತಿದ್ದೀರ. ಇದು 1920 ರ ದಶಕದಲ್ಲಿ ಭಗತ್ ಸಿಂಗ್ ತೋರಿದ ಧೈರ್ಯಕ್ಕೆ ಸಮನಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

‘ಸಮಾಜದಲ್ಲಿ ಏನಾದರೂ ಸರಿಯಾಗಿಲ್ಲದಿದ್ದಾಗ ಸೆಲೆಬ್ರಿಟಿಗಳೂ ಸಹ ಸಾಮಾನ್ಯ ವ್ಯಕ್ತಿಯಾಗಿ ಸರ್ಕಾರದ ವಿರುದ್ಧ ಮಾತನಾಡಲು ಇದು ಒಂದು ಉತ್ತಮ ಉದಾಹರಣೆಯಾಗಲಿದೆ. ನಿಮಗೆ ನಾನು ನಮಸ್ಕರಿಸುತ್ತೇನೆ’ ಎಂದು ವಿಶಾಲ್ ತಿಳಿಸಿದ್ದಾರೆ.

Comments are closed.