ಮುಂಬೈ

ದೈಹಿಕ ಸಂಪರ್ಕಕ್ಕಾಗಿ ಒತ್ತಾಯಿಸುತ್ತಿದ್ದವನ 27ರ ಹರೆಯದ ವ್ಯಕ್ತಿಯ ಮರ್ಮಾಂಗ ಕತ್ತರಿಸಿದ 47ರ ಹರೆಯದ ಮಹಿಳೆ

Pinterest LinkedIn Tumblr


ಕಲ್ಯಾಣ್: ದೈಹಿಕ ಸಂಪರ್ಕಕ್ಕಾಗಿ ಒತ್ತಾಯಿಸುತ್ತಿದ್ದ ನೆರೆಮನೆಯಾತನ ಕಿರುಕುಳಕ್ಕೆ ರೋಸಿಹೋದ 47 ವರ್ಷದ ಮಹಿಳೆಯೊಬ್ಬರು, ಮತ್ತಿಬ್ಬರ ಜತೆ ಸೇರಿ ಆತನ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಮುಂಬಯಿನ ದೊಂಬಿವಿಲಿಯಲ್ಲಿ ನಡೆದಿದೆ.

ಬಹುರಾಷ್ಟ್ರೀಯ ಬ್ಯಾಂಕೊಂದರ ಉದ್ಯೋಗಿಯಾಗಿರುವ ತುಷಾರ್ ಪೂಜಾರೆ (27) ಎಂಬಾತನೇ ಮರ್ಮಾಂಗ ಕಳೆದುಕೊಂಡು ಆಸ್ಪತ್ರೆ ಸೇರಿದ ಆಸಾಮಿ.

ಕೃತ್ಯದ ಬಳಿಕ ಮಹಿಳೆಯೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದು, ಅಪರಾಧ ವಿಭಾಗಕ್ಕೂ ಮಾಹಿತಿ ನೀಡಿದ್ದಾಳೆ. ಗಾಯಗೊಂಡಿರುವ ತುಷಾರ್ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪ್ರಕರಣ ಸಂಬಂಧ ಮಹಿಳೆ ಸೇರಿದಂತೆ ಆಕೆಯ ಸ್ನೇಹಿತರಾದ ತೇಜಸ್ ಮಹಾತ್ರೆ (22) ಹಾಗೂ ಪ್ರವೀಣ್ ಕೆನಿಯಾ (25) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತುಷಾರ್ ಪೂಜಾರೆ ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದು, ಲೈಗಿಂಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ತನ್ನ ಪ್ರೀತಿಯ ವಿಷಯವನ್ನು ಮಹಿಳೆಯ ಪತಿಯ ಮುಂದೆಯೂ ಹೇಳಿಕೊಂಡಿದ್ದ. ಇದರಿಂದ ಮಹಿಳೆಯ ಸಂಸಾರದಲ್ಲಿ ಕಲಹ ಉಂಟಾಗಿದ್ದು, ಪತಿ-ಪತ್ನಿ ಮಧ್ಯೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಮಹಿಳೆ, ಮತ್ತಿಬ್ಬರು ಯುವಕರ ಸಹಾಯ ಪಡೆದು ಪಾಗಲ್ ಪ್ರೀಮಿ ತುಷಾರ್‌ನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

Comments are closed.