ಮುಂಬೈ

ತಾಯಿ ಕೆನ್ನೆಗೆ ಹೊಡೆದಿದ್ದಕ್ಕೆ ಮಗನಿಂದ ನೆರೆಮನೆಗೆ ಕತ್ತಿ ಹಿಡಿದು ದಾಳಿ

Pinterest LinkedIn Tumblr

mumbai

ಮುಂಬೈ: ಗಂಡು ಮಕ್ಕಳಿಗೆ ತಾಯಿ ಮೇಲೆ ಹೆಚ್ಚು ಪ್ರೀತಿ ಇರುತ್ತೆ. ಆದ್ರೆ ಕೆಲವೊಮ್ಮೆ ಅದೇ ಪ್ರೀತಿ ಸಮಸ್ಯೆಗೆ ಕಾರಣವಾಗುತ್ತೆ. ಇದೇ ರೀತಿ ಒಂದು ಘಟನೆ ಮುಂಬೈನಲ್ಲೂ ನಡೆದಿದ್ದು, ತಾಯಿ ಕೆನ್ನೆಗೆ ಹೊಡೆದಿದ್ದಕ್ಕೆ ಯುವಕನೊಬ್ಬ ನೆರೆಮೆನೆಯವರ ಮೇಲೆ ದಾಳಿಗೆ ಮುಂದಾಗಿದ್ದಾನೆ.

ಮುಂಬೈನ ಭಯಂದರ್‍ನಲ್ಲಿರುವ ಪ್ಲಾನೆಟೇರಿಯಾ ಕಾಂಪ್ಲೆಕ್ಸ್ ನ ಅಪಾರ್ಟ್‍ಮೆಂಟ್‍ನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಸಣ್ಣ ಗಲಾಟೆಯಲ್ಲಿ ಯುವಕ ಧೋನಿ ಗೋಪಾಲ್ ಎಂಬಾತನ ತಾಯಿಗೆ ಪಕ್ಕದ ಮನೆಯವರು ಕೆನ್ನೆಗೆ ಹೊಡೆದಿದ್ದಾರೆ. ಆದ್ರೆ ಇದರಿಂದ ಕೆರಳಿದ ಧೋನಿ ತಮ್ಮ ಮನೆಯಲ್ಲಿ ಪೂಜೆಗೆ ಬಳಸುವ ಕತ್ತಿಯನ್ನ ತೆಗೆದುಕೊಂಡು ಹೋಗಿ ದಾಳಿ ಮಾಡಲು ಯತ್ನಿಸಿದ್ದಾನೆ.

ಆಗಿದ್ದೇನು?: ಯುವಕ ಧೋನಿ ನಗರದ ರಿಝ್ವಿ ಕಾಲೇಜಿನಲ್ಲಿ ಓದುತ್ತಿದ್ದು, ತನ್ನ ತಾಯಿಯ ಮೇಲೆ ಸುಖಾ ಸುಮ್ಮನೆ ದಾಳಿ ಮಾಡಿದ ನೆರೆಮನೆಯವರ ಮೇಲೆ ದಾಳಿ ಮಾಡಲು ಅವರ ಮನೆಗೆ ತೆರಳಿದ್ದಾನೆ. ಆದ್ರೆ ಅವರು ಬಾಗಿಲು ತೆಗೆದಿಲ್ಲ, ಇದ್ರಿಂದ ಕೋಪಗೊಂಡ ಆತ ಕತ್ತಿಯನ್ನ ಹಿಡಿದುಕೊಂಡೆ 3ನೇ ಮಹಡಿ ಹತ್ತಿ ಕಿಟಕಿಯಿಂದ ಹಲ್ಲೆಗೆ ಮುಂದಾಗಿದ್ದಾನೆ.

ಅಷ್ಟರಲ್ಲಿ ಜನರೆಲ್ಲ ಅಲ್ಲಿ ಸೇರಿದ್ದಾರೆ. ಇತ್ತ ಯುವಕ ಪಕ್ಕದವರಿಗೆ ಮೇಲಿಂದಲೇ ಬೆದರಿಕೆ ಹಾಕಿದ್ದಾನೆ. ಕೊನೆಗೆ ಆತನನ್ನು ಕೆಳಗಿಳಿಸಲು ಪ್ರಯತ್ನ ಮಾಡಿದರೂ ಅದು ವಿಫಲವಾಗಿದೆ. ಇದಾದ ಬಳಿಕ ಬಂದ ಪೊಲೀಸರು ಆತನನ್ನು ಕೆಳಗಿಳಿಸಿ ಬಂಧಿಸಿದ್ದಾರೆ.

Comments are closed.