ಮುಂಬೈ

ವಿಧಿವಶರಾದ ಜೈನ ಮುನಿಯ ಚಿತೆಗೆ ಅಗ್ನಿಸ್ಪರ್ಶ ಮಾಡುವ ಅವಕಾಶಕ್ಕಾಗಿ 11 ಕೋಟಿ ರೂ. ಬಿಡ್‌ ! ಚಿತೆಗೆ 300 ಕೆ ಜಿ ಶ್ರೀಗಂಧ ಬಳಕೆ …ಗರಿಷ್ಠ ದಾಖಲೆ !

Pinterest LinkedIn Tumblr

Kaldharma

ಮುಂಬಯಿ: ಕಳೆದ ಭಾನುವಾರ ವಿಧಿವಶರಾದ ಜೈನ ಮುನಿಯ ಚಿತೆಗೆ ಅಗ್ನಿಸ್ಪರ್ಶ ಮಾಡಲು ಐವರು ಸಾಮೂಹಿಕವಾಗಿ ದಾಖಲೆಯ 11 ಕೋಟಿ ರೂ. ಬಿಡ್‌ ಮಾಡಿದ್ದಾರೆ. ಆ ಮೂಲಕ ಚಿತೆಗೆ ಅಗ್ನಿಸ್ಪರ್ಶ ಮಾಡುವ ಅವಕಾಶವನ್ನು ಕಾಯ್ದಿರಿಸಿಕೊಂಡಿದ್ದಾರೆ.

ಜೈನ ಸಮುದಾಯದಲ್ಲಿ ಮುನಿಗಳ ಚಿತೆಗೆ ಅಗ್ನಿಸ್ಪರ್ಶಕ್ಕಾಗಿ ಭಾರಿ ಮೊತ್ತದ ಹಣ ನೀಡುವುದು ವಾಡಿಕೆಯಾದರೂ, 11 ಕೋಟಿ ರೂ. ಇದುವರೆಗಿನ ಗರಿಷ್ಠ ದಾಖಲೆ ಎನ್ನಲಾಗಿದೆ.

ನ್ಯುಮೋನಿಯಾ ಹಾಗೂ ವಯೋಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಜೈನ ಮುನಿ ಶ್ರೀ ಪ್ರೇಮ್‌ಸುರ್ಜಿಸ್ವಾಜಿ (97) ಅವರು ಮುಂಬಯಿನ ಸೈಫಿ ಆಸ್ಪತ್ರೆಯಲ್ಲಿ ಕಳೆದ ಭಾನುವಾರ ವಿಧಿವಶರಾಗಿದ್ದರು.

ತಪಗಚ್ಛ ಪಂಡಗದ ಮುಖ್ಯಸ್ಥರಾಗಿದ್ದ ಇವರು, ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಮಂದಿಗೆ ದೀಕ್ಷೆ ನೀಡಿದ್ದಲ್ಲದೆ, ಅಪಾರ ಅನುಯಾಯಿಗಳನ್ನೂ ಹೊಂದಿದ್ದರು.

11,11,11,111 ಕೋಟಿ ರೂ. ಬಿಡ್ಡಿಂಗ್‌:
ಮುಂಬಯಿನ ವಾಲ್ಕೇಶ್ವರ ದೇಗುಲದಲ್ಲಿ ಭಾನುವಾರ ಸುಮಾರು ಮೂರು ಗಂಟೆಗಳ ಕಾಲ ಬಿಡ್ಡಿಂಗ್‌ ಪ್ರಕ್ರಿಯೆ ನಡೆದಿದೆ. ಬಾಬು ಪನ್ನಾಲಾಲ್‌ ಜೈನ್‌ ಎಂಬುವವರು ಅಂತಿಮವಾಗಿ 11, 11, 11,111 ರೂ.ಗೆ ಬಿಡ್‌ ಕೂಗುವ ಮೂಲಕ ಅಗ್ನಿಸ್ಪರ್ಶ ಹಕ್ಕನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಳೇಬರ ಹೊರಲೂ ಲಕ್ಷ ಲಕ್ಷ ಹಣ: ಮುನಿಗಳ ಪಾರ್ಥಿವ ಶರೀರ ಹೊರಲು ನಾಲ್ಕು ಮಂದಿ ತಲಾ 21 ಲಕ್ಷ ರೂ. ಬಿಡ್‌ ಮಾಡಿದ್ದಾರೆ. ಚಟ್ಟದ ಸುತ್ತಲೂ ನೀರು ತುಂಬಿದ ನಾಲ್ಕು ಬೆಳ್ಳಿಯ ಕುಡಿಕೆಗಳನ್ನು ಇರಿಸುವ ಕೆಲಸಕ್ಕೂ 21 ಲಕ್ಷ ರೂ. ಹಣ ನೀಡಲಾಗಿದೆ.

300 ಕೆ ಜಿ ಗಂಧ: ಸಾವಿರಾರು ಜೈನರ ಸಾಕ್ಷಿಯಾಗಿ ಭಾನುವಾರ ಮುನಿಗಳ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಿ, ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಮುನಿಗಳ ಚಿತೆಗೆ ಸುಮಾರು 300 ಕೆ ಜಿ ಶ್ರೀಗಂಧವನ್ನು ಬಳಸಲಾಗಿದೆ.

ಹೊಸ ದಾಖಲೆ: ಕಳೆದ ಜುಲೈನಲ್ಲಿ ಮಧ್ಯ ಪ್ರದೇಶದಲ್ಲಿ ವಿಧಿವಶರಾದ ಶ್ರೀಮದ್ವಿಜಯ್‌ ರವೀಂದ್ರಸೂರಿ ಮಹಾರಾಜ್‌ಸಾಹೇಬ್‌ ಜೀ ಅವರ ಅಂತ್ಯ ಸಂಸ್ಕಾರಕ್ಕೆ 7 ಕೋಟಿ ರೂ. ಬಿಡ್‌ ಮಾಡಲಾಗಿತ್ತು.

ಜೈನ ಮುನಿಗಳ ಅಂತಿಮ ವಿಧಿ ವಿಧಾನದ ಪ್ರತಿ ಪ್ರಕ್ರಿಯೆಗೂ ಬಿಡ್ಡಿಂಗ್‌ ನಡೆಯುತ್ತದೆ. ಈ ಮೂಲಕ ಸಂಗ್ರಹಿಸಲಾದ ಹಣವನ್ನು ಧಾರ್ಮಿಕ ಹಾಗೂ ದತ್ತಿ ಚಟುವಟಿಕೆಗಳಿಗೆ ಬಳಸಲಾಗುತ್ತದೆ.

Comments are closed.