ಮುಂಬೈ

ಮಹಾರಾಷ್ಟ್ರ ಸದನ ಹಗರಣ:ಎನ್ ಸಿಪಿ ಮುಖ್ಯಸ್ಥ ಛಗನ್ ಭುಜಬಲ್ ಬಂಧನ

Pinterest LinkedIn Tumblr

Chagan Bhujbal

ಮುಂಬಯಿ: ಹಿರಿಯ ಎನ್ ಸಿಪಿ ಮುಖಂಡ ಹಾಗೂ ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶಾನಾಲಯ ಅಧಿಕಾರಿಗಳು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.

ಛಗನ್ ಭುಜಬಲ್ ಅವರ ವಿರುದ್ಧ ಹಣ ದುರ್ಬಳಕೆ ಆರೋಪದ ಪ್ರಕಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಛಗನ್ ಭುಜಬಲ್ಅವರನ್ನು ಬಂಧಿಸಿರುವ ಜಾರಿ ನಿರ್ದೇಶಾನಾಲಯ ಅಧಿಕಾರಿಗಳು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಇನ್ನು ಛಗನ್ ಭಜಬಲ್ ಅವರ ಹೇಳಿಕೆಯನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಹಣ ದುರುಪಯೋಗ ತಡೆ ಕಾಯಿದೆ ಅನ್ವಯ ಎನ್ ಸಿ ಪಿ ಮುಖ್ಯಸ್ಥ ಛಗನ್ ಭುಜಬಲ್, ಅವರ ಪುತ್ರ, ಹಾಗೂ ಅವರ ಹಲವು ಸಂಬಂಧಿಗಳ ವಿರುದ್ಧ ದೂರು ದಾಖಲಿಸಿಕೊಂಡಿರುವ ಜಾರಿ ನಿರ್ದೇಶಾನಲಯ ಎಫ್ ಐ ಆರ್ ದಾಖಲಿಸಿದೆ.

Write A Comment