ಮನೋರಂಜನೆ

ರಾಜೇಶ್ ಖನ್ನಾರ ‘ಆಶೀರ್ವಾದ್‌’ ಬಂಗಲೆ ನೆಲಸಮ

Pinterest LinkedIn Tumblr

ashirwad bangla

ಮುಂಬೈ: ಬಾಲಿವುಡ್ ನಟ ದಿವಂಗತ ರಾಜೇಶ್ ಖನ್ನಾ ಅವರ ಬಂಗಲೆ ಆಶೀರ್ವಾದ್ ಶುಕ್ರವಾರ ನೆಲ ಸಮವಾಗಿದೆ. ಮುಂಬೈನ ಕಾರ್ಟರ್ ರಸ್ತೆಯಲ್ಲಿ ಪ್ರಮುಖ ಲ್ಯಾಂಡ್‌ಮಾರ್ಕ್ ಆಗಿದ್ದ ವರದಾನ್ ಆಶೀರ್ವಾದ್ ಬಂಗ್ಲೆಯನ್ನು ಶಶಿ ಕಿರಣ್ ಶೆಟ್ಟಿ ಎಂಬ ಉದ್ಯಮಿ ಖರೀದಿಸಿದ್ದರು. ಇದೀಗ ಶೆಟ್ಟಿ ಅಲ್ಲಿ ಹೊಸ ಮನೆಯನ್ನು ನಿರ್ಮಾಣ ಮಾಡುವುದಕ್ಕಾಗಿ ಆಶೀರ್ವಾದ್ ಬಂಗಲೆಯನ್ನು ಕೆಡವಿದ್ದಾರೆ.

ಸಮುದ್ರಕ್ಕೆ ಮುಖ ಮಾಡಿರುವ ಈ ಬಂಗ್ಲೆಯನ್ನು ರಾಜೇಶ್ ಖನ್ನಾ ಅವರು 1970ರಲ್ಲಿ ನಟ ರಾಜೇಂದ್ರ ಕುಮಾರ್ ಅವರಿಂದ ರು.3.5 ಲಕ್ಷಕ್ಕೆ ಖರೀದಿ ಮಾಡಿದ್ದರು. ಖನ್ನಾ ಮರಣ ನಂತರ ಖನ್ನಾ ಪುತ್ರಿಯರಾದ ಟ್ವಿಂಕಲ್ ಮತ್ತು ರಿಂಕಿ ಈ ಮನೆಯನ್ನು ಆಗಸ್ಟ್ 29, 2014ರಂದು ರು. 90 ಕೋಟಿಗೆ ಮಾರಿದ್ದರು.

ಸುಮಾರು 50 ವರ್ಷ ಹಳೆಯ ಬಂಗಲೆ ಇದಾಗಿದ್ದು, ಇಲ್ಲಿ ಹೊಸ ಬಂಗಲೆ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇನೆ. ಬಂಗಲೆಯ ಪ್ಲಾನ್‌ನ್ನು ಬಿಎಂಸಿಗೆ ಈಗಾಗಲೇ ನೀಡಿದ್ದೇವೆ ಎಂದು ಶೆಟ್ಟಿ ಹೇಳಿದ್ದಾರೆ.

Write A Comment