ಮುಂಬೈ, ಜು.20-ಇಬ್ಬರು ಯುವಕರು ಯೋಧನ ಸಂಗಡ ಸಂಘರ್ಷಕ್ಕಿಳಿದು ಆತನ ಬಳಿಯಿದ್ದ ಪಿಸ್ತೂಲು ಕಸಿದುಕೊಂಡು ಯೋಧನನ್ನು ಗುಂಡಿಕ್ಕಿ ಹತ್ಯೆಮಾಡಿದ ಘಟನೆ ಉತ್ತರ ಮಹಾರಾಷ್ಟ್ರದ ಭೂಸವಾಲದಲ್ಲಿ ನಡೆದಿದೆ.
ಶೇಖ್ ಅಖಿಲ್ (32) ಎಂಬುವವನೇ ಮೃತಯೋಧನಾಗಿದ್ದಾನೆ.
ಜಲಗಾಂವ್ ಜಿಲ್ಲೆಯ ಭೂಸವಾಲದ ಬಜಾರ್ ಪೇಟೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ. 20 ವರ್ಷದ ಇಬ್ಬರು ಯುವಕರು ಕ್ಷುಲ್ಲಕ ಕಾರಣಕ್ಕ ಯೋಧನೊಂದಿಗೆ ಜಗಳ ತೆಗೆದರು. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ ಓರ್ವ ಯುವಕ ಯೋಧನ ಬಳಿ ಇದ್ದ ಪಿಸ್ತೂಲನ್ನು ಕಸಿದುಕೊಂಡು ಗುಂಡು ಹಾರಿಸಿದ ಇದರಿಂದ ರಕ್ತದ ಮಡುವಿನಲ್ಲಿ ಬಿದ್ದ ಯೋಧನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟನೆಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.