ಮುಂಬೈ

ಮಾಂಸಾಹಾರ ಸೇವಿಸಿದ್ದಕ್ಕೆ ಮರಾಠಿ ರಂಗ ನಿರ್ಮಾಪಕ, ಕುಟುಂಬದ ಮೇಲೆ ದಾಳಿ

Pinterest LinkedIn Tumblr

buter-chicken

ಮುಂಬಯಿ: ರಂಗಭೂಮಿಯಲ್ಲಿ ನಾನಾ ನಾಟಕಗಳನ್ನು ನಿರ್ಮಾಣ ಮಾಡಿದ್ದ ವ್ಯಕ್ತಿ ಮನೆಯಲ್ಲೇ ತಮ್ಮ ಹಾಗೂ ಕುಟುಂಬದ ಸದಸ್ಯರ ಮೇಲೆ ಹಲ್ಲೆ ‘ನಾಟಕ”ಕ್ಕೆ ಮೂಕ ಪ್ರೇಕ್ಷಕನಾಗುವ ಸಂದರ್ಭ ಎದುರಾಗಿತ್ತು!

ಉತ್ತರ ಮುಂಬಯಿಯ ಹೌಸಿಂಗ್ ಸೊಸೈಟಿಯಲ್ಲಿ ವಾಸವಿರುವ ಗೋವಿಂದ ಚವಾಣ್‌ ಎಂಬ ನಾಟಕಗಳ ನಿರ್ಮಾಪಕನ ಮೇಲೆ ಅವರು ವಾಸವಿರುವ ಅಪಾರ್ಟ್‌ಮೆಂಟ್‌ನ ಅಕ್ಕಪಕ್ಕದ ನಿವಾಸಿಗಳು ದಾಳಿ ನಡೆಸಿದ್ದಾರೆ ಎಂದು ದೂರಲಾಗಿದೆ. ತಮ್ಮ ಮನೆಯಲ್ಲಿ ಮಾಂಸಾಹಾರ ಅಡುಗೆ ಮಾಡಿ ತಿಂದಿದ್ದಕ್ಕೆ ಅವರೆಲ್ಲ ಆಕ್ರೋಶಗೊಂಡು ದಾಳಿ ನಡೆಸಿದ್ಧಾರೆ ಎಂದು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಇತ್ತೀಚೆಗೆ ಮಲಾಡ್‌ನ ಹೌಸಿಂಗ್ ಸೊಸೈಟಿಯೊಂದರಲ್ಲಿ ವ್ಯಕ್ತಿಯೊಬ್ಬರು ಮಾಂಸಾಹಾರಿ ಎನ್ನುವ ಕಾರಣಕ್ಕೆ ಫ್ಲಾಟ್‌ ಬಾಡಿಗೆಗೆ ನೀಡಲು ನಿರಾಕರಿಸಿದ ಘಟನೆ ಮರೆಯುವ ಮನ್ನವೇ ಈ ಪ್ರಕರಣ ವರದಿಯಾಗಿದೆ.

ಗೋವಿಂದ ಚವಾಣ್‌ ಅವರು ದಹಿಸರ್‌ನಲ್ಲಿ ವಾಸವಿದ್ದು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮಾಂಸಾಹಾರ ಸಿದ್ಧಪಡಿಸಿ ತಮ್ಮ ಕುಟುಂಬದವರೊಂದಿಗೆ ಸೇವಿಸಿದ್ದರು. ಅದರಿಂದ ಇತರೆ ಕೆಲ ಮನೆಯವರು ಕ್ರುದ್ಧರಾಗಿದ್ದರು ಎನ್ನಲಾಗಿದೆ.

ಶಾಸಕ ಬೆಂಬಲ:

ಇದೀಗ ಪ್ರಕರಣಕ್ಕೆರಾಜಕೀಯ ಬಣ್ಣ ಬಂದಿದ್ದು, ತಾವು ಈಗಾಗಲೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ 48 ವರ್ಷದ ಗೋವಿಂದ ಚವಾಣ್ ಅವರನ್ನು ಬೆಂಬಲಿಸುವುದಾಗಿ ಕಾಂಗ್ರೆಸ್‌ ಶಾಸಕ ನಿತೇಶ್‌ ರಾಣೆ ಹೇಳಿದ್ದಾರೆ.

ಚವಾಣ್‌ ಅವರ ದೂರಿನ ಅಧಾರದಲ್ಲಿ ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment