ಮುಂಬೈ

ಕ್ರಿಕೆಟ್ ಚೆಂಡು ಹೊಡೆದದಕ್ಕಾಗಿ ಯುವಕನನ್ನೇ ಹೊಡೆದು ಕೊಂದು ಹಾಕಿದ ಅಪ್ಪ – ಮಕ್ಕಳು!

Pinterest LinkedIn Tumblr

ball

ಥಾಣೆ, ಜೂ.13: ಕ್ರಿಕೆಟ್ ಆಡುತ್ತಿದ್ದ ತರುಣನೋರ್ವ ಹೊಡೆದ ಚೆಂಡು ತಮ್ಮ ಮನೆಗೆ ಬಂದು ಬಡಿದಾಗ ಕ್ಷುದ್ರಗೊಂಡ ಮನೆಯ ಯಜಮಾನ ಹಾಗೂ ಆತನ ನಾಲ್ವರು ಮಕ್ಕಳು ಸೇರಿ ಆ ತರುಣನಿಗೆ ಯದ್ವಾತದ್ವಾ ಹೊಡೆದು ಆತನನ್ನು ಕೊಂದೇಬಿಟ್ಟ ಘಟನೆ ಇಲ್ಲಿನ ಭಿವಂಡಿಯಲ್ಲಿ ನಡೆದಿದೆ.

ಇಲ್ಲಿನ ಮ್ಹಾಡಾ ಕಾಲನಿಯ ನದೀನಾಕಾ ಎಂಬಲ್ಲಿ 18 ವರ್ಷ ಪ್ರಾಯದ ನಯೀನ್ ರಯೀಸ್ ಸಯ್ಯದ್ ಎಂಬಾತ ಶುಕ್ರವಾರ ರಾತ್ರಿ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಕ್ರಿಕೆಟ್ ಆಡುತ್ತಿದ್ದ. ಆತ ಹೊಡೆದ ಚೆಂಡು ತನ್ನ ಮನೆಗೆ ಬಂದು ಬಡಿದು ಹಾನಿ ಉಂಟಾದಾಗ ಅಜಾನ್ ಖಾನ್ ಎಂಬಾತನಿಗೆ ವಿಪರೀತ ಸಿಟ್ಟುಬಂತು.

ಅಜಾನ್ ಖಾನ್ ಜತೆಗೆ ಆತನ ನಾಲ್ವರು ಪುತ್ರರು ಕೂಡ ಸೇರಿ ನಯೀನ್ನನ್ನು ಹಿಗ್ಗಾಮುಗ್ಗಾ ಹೊಡೆದರು. ಪರಿಣಾಮವಾಗಿ ನಯೀನ್ ತೀವ್ರಗಾಯಗೊಂಡು ಸತ್ತೇಹೋದ ಎಂದು ನಿಜಾಮಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಾತಾವ್ಕರ್ ತಿಳಿಸಿದರು.

ಮೃತ ನಯೀನ್‌ರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಜಾನ್ ಖಾನ್, ಆತನ ನಾಲ್ವರು ಪುತ್ರರು ಮತ್ತು ಇನ್ನೂ ಮೂವರ ವಿರುದ್ಧ ಐಪಿಸಿ ಸೆ.302 (ಕೊಲೆ), ಸೆ.143, ಸೆ.147, ಸೆ.323ರ ಪ್ರಕಾರ ಕೇಸು ದಾಖಲಿಸಲಾಗಿದೆ ಎಂದು ದಾತಾವ್ಕರ್ ತಿಳಿಸಿದರು.

Write A Comment