ಮುಂಬಯಿ : ಕರ್ನಾಟಕ ಸಂಘ ಮುಂಬಯಿ ಇದರ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕನಕದಾಸ ಸಂಶೋಧನ ಕೇಂದ್ರ ಮಂಗಳ ಗಂಗೋತ್ರಿ ಇವರು ಕನಕ ಜಯಂತಿ ನಿಮಿತ್ತ ’ಕನಕ ತತ್ವ ಚಿಂತನೆ ಪ್ರಚಾರೋಪನ್ಯಾಸ ಮಾಲಿಕೆಯಲ್ಲಿ ಜ. 10 ರಂದು ಮಂಗಳೂರು ವಿ.ವಿ. ಕಾಲೇಜ್ ನ ಇಂಗ್ಲೀಷ್ ವಿಭಾಗದ ಡಾ. ರಾಜಲಕ್ಷ್ಮೀ ಎನ್. ಕೆ. ಅವರು ಉಪನ್ಯಾಸವನ್ನು ನೀಡಿದರು.
ಕನಕದಾಸ ಸಂಶೋಧನ ಕೇಂದ್ರ ಮಂಗಳ ಗಂಗೋತ್ರಿ ಇದರ ಪ್ರಮುಖರಾದ ಪ್ರೊ. ಶಿವರಾಮ ಶೆಟ್ಟಿ ಮಾತನಾಡುತ್ತಾ ಕರ್ನಾಟಕದ ಹೊರಗೆ ಹಾಗೂ ಒಳಗಡೆ ಈ ತನಕ ನೂರಎರಡು ಪ್ರಾಚಾರೋಪಾನ್ಯಾಸಗಳು ಆಗಿದ್ದು ಈ ಸಲ 26 ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಜೋಕಟ್ಟೆ ಅಧ್ಯಕ್ಷತೆ ವಹಿಸಿದ್ದು ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್