ಕರ್ನಾಟಕ

ಸ್ನೇಹಿತನಿಂದ ಮೋಸಹೋದ ಯುವಕ; ಫೇಸ್‍ಬುಕ್ ನಲ್ಲಿ ಲೈವ್ ವೀಡಿಯೋ ಅಪ್ಲೋಡ್ ಮಾಡಿ ನೇಣಿಗೆ ಶರಣು

Pinterest LinkedIn Tumblr

ಬೆಂಗಳೂರು: ಸ್ನೇಹಿತನಿಂದ ಮೋಸಹೋದ ಯುವಕನೋರ್ವ ಫೇಸ್‍ಬುಕ್ ನಲ್ಲಿ ಲೈವ್ ವೀಡಿಯೋ ಅಪ್ಲೋಡ್ ಮಾಡಿ ನೇಣಿಗೆ ಶರಣಾಗಿರುವ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡ ಯುವಕ. ನನ್ನ ಸ್ನೇಹಿತ ಪವನ್.ಬಿ ಎಂಬಾತ 11 ಲಕ್ಷ ರೂ. ಹಣ ಪಡೆದು ವಾಪಸ್ಸು ನೀಡಿದೆ ಹಿಂಸೆ ಮಾಡುತ್ತಿದ್ದಾನೆ. ಹಣ ವಾಪಸ್ಸು ಕೇಳಿದರೆ ಹುಡುಗರನ್ನು ಕಳುಹಿಸಿ ಜೀವ ಬೆದರಿಕೆ ಹಾಕುತ್ತಿದ್ದಾನೆ. ಪವನ್ ಬಿ ನನ್ನ ಸಾವಿಗೆ ಕಾರಣ. ತನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಮಂಜುನಾಥ್ ವೀಡಿಯೋ ಅಪ್ ಲೋಡ್ ಮಾಡಿ ನೇಣಿಗೆ ಶರಣಾಗಿದ್ದಾನೆ.

ಕಳೆದ 6 ತಿಂಗಳಿನಿಂದ 11 ಲಕ್ಷ ಪಡೆದಿರೋ ಪವನ್ ಬಳಿ ಹಣ ವಾಪಸ್ ಕೇಳಿದ್ರೇ ಜೀವ ಬೆದರಿಕೆ ಹಾಕುತ್ತಿದ್ದಾನೆ. ನನ್ನ ಹಣದಲ್ಲಿ ಕಾರು, ಮೊಬೈಲ್ ತಗೊಂಡಿದ್ದಾರೆ. ನನ್ನ ಹಣವನ್ನು ವಾಪಾಸ್ ಕೇಳಿದರೆ ಹುಡುಗರನ್ನು ಕಳುಹಿಸಿ ಜೀವದೆಕರಿಕೆ ಹಾಕುತ್ತಿದ್ದಾರೆ. ಪವನ್.ಬಿ ನನ್ನ ಸಾವಿಗೆ ಕಾರಣ ಎಂದು ವೀಡಿಯೋ ಮಾಡಿ ಯುವಕ ನೇಣಿಗೆ ಶರಣಾಗಿದ್ದಾನೆ. ಸದ್ಯ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಈ ಪ್ರಕರಣ ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Comments are closed.