ಕರ್ನಾಟಕ

ಬೆಂಗಳೂರು ಸ್ಮಾರ್ಟ್‌ ಸಿಟಿ ರಸ್ತೆಗಳ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ

Pinterest LinkedIn Tumblr

ya

ಬೆಂಗಳೂರು: ಬೆಂಗಳೂರು ಮಹಾನಗರ ಸ್ಮಾರ್ಟ್‌ ಸಿಟಿ ರಸ್ತೆಗಳ ಕಾಮಗಾರಿಯ ಪ್ರಗತಿಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಶನಿವಾರ ಪರಿಶೀಲನೆ ನಡೆಸಿದರು. ಬಸ್‌ನಲ್ಲಿ ಪ್ರಯಾಣ ಮಾಡುವ ಮೂಲಕ ನಗರಕ್ಕೆ ಪ್ರದಕ್ಷಿಣೆ ಹಾಕಿದ ಬಿಎಸ್‌ವೈ ರಸ್ತೆಗಳ ಕಾಮಗಾರಿಯಲ್ಲಾದ ಪ್ರಗತಿಯ ಕುರಿತಾಗಿ ಪರಿಶೀಲನೆ ನಡೆಸಿದರು.

ವಿಧಾನಸೌಧ ಪಶ್ಚಿಮ ದ್ವಾರದಿಂದ ರೇಸ್‌ ಕೋರ್ಸ್‌ ರಸ್ತೆ, ಬಸವೇಶ್ವರ ಸರ್ಕಲ್ ದೇವರಾಜ ಅರಸು ರಸ್ತೆ, ಎಜೆಎಸ್‌ ಜಂಕ್ಷನ್ ಮೂಲಕ ಸಾಗಿ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಗಳ ಪರಿಶೀಲನೆಯನ್ನು ಮಾಡಿದರು. ಅಷ್ಟೇ ಅಲ್ಲದೆ ಅಂಬೇಡ್ಕರ್‌ ರಸ್ತೆ, ಗೋಪಾಲ್‌ ಗೌಡ ವೃತ್ತ ಮೂಲಕ ಕಬ್ಬನ್ ಪಾರ್ಕ್‌ ಮೂಲಕ ಸಿದ್ದಲಿಂಗಯ್ಯ ವೃತ್ತ- ಐಟಿಸಿ ಜಂಕ್ಷನ್‌ ಮತ್ತು ಪಿಎಫ್‌ ಕಟ್ಟದ ರಾಮ್ ಮೋಹನ್ ರಸ್ತೆಗಳ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ಹೇಯ್ಸ್ ರೋಡ್ ಜಂಕ್ಷನ್ ಸ್ಥಳ ಪರಿಶೀಲನೆ, ವಾರ್‌ ಮೆಮೋರಿಯಲ್‌ ಮೂಲಕ ಹುಡ್‌ ಸ್ಟ್ರೀಟ್‌ ಮತ್ತು ಟಾಟಾ ಲೇನ್ ಸ್ಥಳ ಪರಿಶೀಲನೆ ಹಾಗೂ ರಿಚ್ಮಂಡ್‌ ರಸ್ತೆ ಮೂಲಕ ಎಸ್‌ಬಿಐ ಜಂಕ್ಷನ್‌ ಕೋಷಿಸ್ – ಎಂಜಿ ರಸ್ತೆ ಸಿಟಿಓ ಜಂಕ್ಷನ್ ಕ್ಯಾಪಿಟಲ್‌ ಹೋಟೆಲ್‌ ರಾಜಭವನದ ಜಂಕ್ಷನ್ ಸ್ಥಳ ಪರಿಶೀಲನೆಯನ್ನು ನಡೆಸಿದರು.

ಈ ವೇಳೆ ರಸ್ತೆ ಕಾಮಗಾರಿಯಲ್ಲಾದ ಪ್ರಗತಿಯ ಕುರಿತಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಬಾಕಿ ಉಳಿದಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಬಿಎಸ್‌ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಿದರು.

Comments are closed.