ಕರ್ನಾಟಕ

ಯಡಿಯೂರಪ್ಪ ಸರಕಾರದ ನೂತನ ಸಚಿವರ ಪಟ್ಟಿ ಹೀಗಿದೆ….

Pinterest LinkedIn Tumblr

ಬೆಂಗಳೂರು: ಇಂದು ಸಂಜೆ ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜಭವನಕ್ಕೆ 7 ಸಚಿವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು. ನೂತನ ಸಚಿವರ ಹೆಸರುಗಳು ಹೀಗಿವೆ.

ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್‌. ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್‌ ಅಂಗಾರ ಹೆಸರುಗಳು ಅಧಿಕೃತಗೊಂಡಿವೆ. ಆದರೆ ಭಾರೀ ಕುತೂಹಲ ಮೂಡಿಸಿದ್ದ ಮುನಿರತ್ನ ನಾಯ್ದ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ.

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಮುನಿರತ್ನ ಅವರಿಗೆ ಕೊನೆಗೂ ನಿರಾಸೆ ಆಗಿದೆ. ಆದರೆ ಒಂದುವರೆ ತಿಂಗಳ ಬಳಿಕ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಮುನಿರತ್ನ ಅವರನ್ನು ಸಂಧಾನದ ಮೂಲಕ ಸಮಾಧಾನ ಪಡಿಸುವಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಹೆಚ್‌ ನಾಗೇಶ್ ರಾಜೀನಾಮೆ ಪಡೆಯಲಾಗುತ್ತಿದೆ ಎನ್ನಲಾಗಿತ್ತು. ಆದರೆ ಇದನ್ನು ಸಿಎಂ ನಿರಾಕರಿಸಿದ್ದಾರೆ. ಇವತ್ತು ನಾಗೇಶ್ ರಾಜೀನಾಮೆ ಪಡೆಯಲ್ಲ ಎಂದಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ರಾಜೀನಾಮೆ ಸಾಧ್ಯತೆ ಇದೆ.

Comments are closed.