ಕರ್ನಾಟಕ

ರಾಮನಗರದ 19 ವರ್ಷದ ಯುವತಿ ಕೊಲೆ ಪ್ರಕರಣದ ತನಿಖೆಗೆ ಖಡಕ್ ಎಸ್ಪಿ ರವಿಚೆನ್ನಣ್ಣನವರ್ ಎಂಟ್ರಿ

Pinterest LinkedIn Tumblr

ರಾಮನಗರ: ಬೆಟ್ಟಹಳ್ಳಿ ಗ್ರಾಮದ ಯುವ​ತಿ ಕೊಲೆ ಪ್ರಕರಣದ ತನಿಖೆ ಜವಾ​ಬ್ದಾ​ರಿ​ಯನ್ನು ​ಸರ್ಕಾರ ಬೆಂಗ​ಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್‌ ಅಧೀ​ಕ್ಷಕ ರವಿ ಡಿ. ಚ​ನ್ನ​ಣ್ಣ​ನ​ವರ್‌ ಅವ​ರಿಗೆ ವಹಿ​ಸಿ​ದೆ.

ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾರಿ ಗಿರೀಶ್‌ ಅವ​ರಿಗೆ ಕೊರೋನಾ ಸೋಂಕು ತಗು​ಲಿದೆ. ಈ ಹಿನ್ನೆ​ಲೆ​ಯಲ್ಲಿ ಕೊಲೆ ಆರೋಪಿಗಳನ್ನು ಪತ್ತೆಹಚ್ಚುವ ಜವಬ್ದಾರಿ ರವಿ ಡಿ.ಚ​ನ್ನ​ಣ್ಣ​ನ​ವರ್‌ ಹೆಗ​ಲಿಗೆ ಬಂದಿ​ದೆ.

ಕಳೆದ ಅ. 8ರಂದು ಬೆಟ್ಟಹಳ್ಳಿ ಗ್ರಾಮದ 19 ವರ್ಷದ ಯುವತಿಯೊಬ್ಬಳು ಕಾಣೆಯಾಗಿದ್ದಳು. ನಿರಂತರ ಹುಡುಕಾಟದ ನಂತರ ಮಾವಿನ ತೋಟದಲ್ಲಿ ಶವವಾಗಿ ಪತ್ತೆಯಾದಳು. ಪೊಲೀ​ಸರು ಪುನೀತ್‌ ಎಂಬ ಯುವಕನನ್ನು ವಿಚಾರಣೆಗೆ ಕರೆದೊಯ್ದಿದ್ದರು. ಇದರ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಯುವ​ತಿ​ಯದು ಕೊಲೆ, ಅತ್ಯಾಚಾರ, ಮರ್ಯಾದೆ ಹತ್ಯೆ ಹೀಗೆ ವಿವಿಧ ರೀತಿಯ ವದಂತಿ​ಗಳು ಹರಿ​ದಾ​ಡು​ತ್ತಿವೆ.

ಮಾಗಡಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಕೊಲೆ ಪ್ರಕ​ರಣ ಕುರಿತಾಗಿ ಮಾಹಿತಿ ಸಂಗ್ರಹಿಸಿದ ರವಿ ಡಿ.ಚ​ನ್ನ​ಣ್ಣ​ನ​ವರ್‌ ಅವ​ರು , ರಾಮನಗರ ಎಎಸ್ಪಿ ರಾಮರಾಜ್, ಡಿವೈಎಸ್ಪಿ ಓಂಪ್ರಕಾಶ್‌, ಮಾಗಡಿ ವೃತ್ತ ನಿರೀ​ಕ್ಷಕ ಬಿ.ಎಸ್‌.ಮಂಜುನಾಥ್‌, ಮಾಗಡಿ ಸಬ್‌ ಇನ್ಸ್‌ಪೆಕ್ಟರ್‌ ವೆಂಕ​ಟೇಶ್‌, ಕುದೂರು ಸಬ್‌ ಇನ್ಸ್‌ಪೆಕ್ಟರ್‌ ಟಿ.ಎಚ್‌ .ಮಂಜು​ನಾಥ್‌ ಅವ​ರಿಗೆ ತನಿಖೆ ಕುರಿತು ಮಾರ್ಗ​ದ​ರ್ಶನ ಮಾಡಿ​ದರು.

ಈ ಪ್ರಕ​ರಣ ಕುರಿತು ಮಾತನಾಡಿದ ರವಿ.ಡಿ. ಚನ್ನಣ್ಣನವರ್‌, ಇದೊಂದು ಗಂಭೀರ ಪ್ರಕರಣವಾಗಿದ್ದು ರಾಮನಗರ ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಗಿರೀಶ್‌ ಅವರು ರಜೆಯಲ್ಲಿರುವ ಕಾರಣ ತನಿಖೆ ಜವಾ​ಬ್ದಾರಿ ನಮ್ಮ ಮೇಲಿದೆ. ಈ ಪ್ರಕ​ರಣ ಸಂಬಂಧ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳಲ್ಲಿ ಮಾಹಿತಿ ಸಂಗ್ರಹಿಸಿದ್ದೇನೆ. ಯಾವುದೇ ಕಾರಣಕ್ಕೂ ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು.

Comments are closed.