ಕರ್ನಾಟಕ

ಪ್ರೇಮಿಗಳ ದಿನದಂದೇ ಹೈಪ್ರೊಫೈಲ್​ ಮ್ಯಾರೇಜ್​​ !

Pinterest LinkedIn Tumblr


ಬೆಂಗಳೂರು: ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಎಸ್.ಎಂ.ಕೃಷ್ಣಾ ಮೊಮ್ಮಗ ಕಾಫಿ ಡೇ ಉದ್ಯಮಿ ದಿ.ಸಿದ್ದಾರ್ಥ್ ಪುತ್ರ ಅಮರ್ತ್ಯ ಹೆಗಡೆಯವರ ಮದುವೆ ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ನಡೆಸಲು ಕುಟುಂಬಗಳು ನಿರ್ಧರಿಸಿವೆ.

ಕಳೆದ ಜೂನ್​ ತಿಂಗಳಿನಲ್ಲಿ ಕೋವಿಡ್​ನಿಂದಾಗಿ ಐಶ್ವರ್ಯಾ ಹಾಗೂ ಅಮರ್ಥ್ಯ ಅವರು ಮನೆಯಲ್ಲಿಯೆ ಸರಳವಾಗಿ ಉಂಗುರ ಬದಲಿಸಿಕೊಂಡಿದ್ದರು. ಇದೀಗ ಎರಡೂ ಕುಟುಂಬಗಳು ತೀರ್ಮಾನಿಸಿ, ಮದುವೆಯ ದಿನಾಂಕವನ್ನು ನಿಗದಿ ಮಾಡಿದ್ದಾರೆ.

ನಿಶ್ಚಿತಾರ್ಥ ಮತ್ತು ಮದುವೆ ಕಾರ್ಯಕ್ರಮಗಳನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿಸಲು ನಿರ್ಧರಿಸಿದ್ದು‌ ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಸ್ಥಳವನ್ನು ಫಿಕ್ಸ್​ ಮಾಡಲಿದ್ದಾರೆ.

ನವೆಂಬರ್ ತಿಂಗಳಿನಲ್ಲಿ ಐಶ್ವರ್ಯಾ ಹಾಗೂ ಅಮರ್ಥ್ಯ ಹೆಗ್ಡೆ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಲಿದ್ದು . ಮದುವೆ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದೆ. ಫೆಬ್ರವರಿ 14 ಪ್ರೇಮಿಗಳ ದಿನದಂದು ಮದುವೆ ಆಗುವ ಬಗ್ಗೆ ಒಲವು ತೋರಿರುವ ಐಶ್ವರ್ಯಾ ಹಾಗೂ ಅಮರ್ಥ್ಯ ಇವರ ಇಚ್ಛೆಂತೆ ಮನೆಯವರು ಅದೇ ದಿನ ಅಥವಾ ಫೆಬ್ರವರಿ 24 ರಂದು ಮದುವೆ ದಿನಾಂಕವನ್ನು ಫೈನಲ್ ಮಾಡಲಿದ್ದಾರೆ.

Comments are closed.