ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನೈಋುತ್ಯ ಮುಂಗಾರು ಅತಿ ಚುರುಕಾಗಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚುರುಕುಗೊಂಡಿದೆ. ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಕರಾವಳಿಯಲ್ಲಿ ಭಾರಿ ಮಳೆ ಬೀಳುವ ಸಂಭವವಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಒಳನಾಡಿಗೆ ಸೇರಿದ 16 ಜಿಲ್ಲೆಗಳ ಪೈಕಿ ಚಿತ್ರದುರ್ಗ, ದಾವಣಗೆರೆ, ಕೋಲಾರ ಹಾಗೂ ಮಂಡ್ಯ ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಇದೇ ವೇಳೆ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಘೋಷಿಸಿದ್ದ ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ಹಿಂಪಡೆದಿದೆ.
ಜಗಲ್ಬೆಟ್ನಲ್ಲಿ ದಾಖಲೆ ಮಳೆ
ಉತ್ತರ ಕನ್ನಡ ಜಿಲ್ಲೆಯ ಜಗಲ್ಬೆಟ್ನಲ್ಲಿಅತ್ಯಧಿಕ 140 ಮಿ.ಮೀ. ಮಳೆಯಾಗಿದೆ. ಕಡೂರು 80, ಕೊಲ್ಲೂರು, ಸಿದ್ದಾಪುರ, ಮುಂಡರಗಿ, ಬಾದಾಮಿ, ಸಂಡೂರಿನಲ್ಲಿತಲಾ 70 ಮಿ.ಮೀ.ನಷ್ಟು ಭಾರಿ ಮಳೆ ಸುರಿದಿದೆ.
ಧರ್ಮಸ್ಥಳ, ಶೃಂಗೇರಿ, ಕೊಪ್ಪ, ಕೊಟ್ಟಿಗೆಹಾರ, ಶ್ರವಣಬೆಳಗೊಳ ತಲಾ 60, ಶಿರಾಲಿ, ವಿರಾಜಪೇಟೆ, ಮೊಳಕಾಲ್ಮೂಧಿರು, ನೆಲಮಂಗಲ, ತೀರ್ಥಹಳ್ಳಿ, ಹಾವೇರಿ, ಪಾವಗಡ ತಲಾ 50, ಪುತ್ತೂರು, ಲೋಕಾಪುರ, ಅಜ್ಜಂಪುರ, ಕಂಪ್ಲಿ, ಮಾಗಡಿ ತಲಾ 40, ಕಾರ್ಕಳ, ಉಡುಪಿ, ಧಾರವಾಡ, ರಾಮದುರ್ಗ, ಸಾಗರ, ಚನ್ನಪಟ್ಟಣ, ಸಾಗರ, ರಾಮನಗರ, ಹೊಸಕೋಟೆ ತಲಾ 30, ಬನವಾಸಿ, ಕುಂದಾಪುರ, ಕನಕಪುರ, ಕೃಷ್ಣರಾಜಪೇಟೆ, ಚಿಂತಾಮಣಿ, ಕೊಳ್ಳೇಗಾಲ, ಹೊಳೆನರಸೀಪುರದಧಿಲ್ಲಿತಲಾ 20 ಮಿ.ಮೀ.ನಷ್ಟು ಮಳೆಯಾಗಿದೆ.
Comments are closed.