ಕರ್ನಾಟಕ

ರಾಜ್ಯದಲ್ಲಿ ಇಂದು (ಗುರುವಾರ) 5030 ಕೊರೋನಾ ಪ್ರಕರಣಗಳು ಪತ್ತೆ: 97 ಮಂದಿ ಸಾವು

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುರುವಾರ ಒಂದೇ ದಿನ ಬರೋಬ್ಬರಿ 97 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1616ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 48 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 97 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ತಿಳಿಸಿದ್ದಾರೆ.

ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 2207 ಹೊಸ ಪ್ರಕರಣಗಳು ವರದಿಯಾಗಿದ್ದು,
ರಾಜ್ಯದಲ್ಲಿ ಒಟ್ಟು 5030 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 80,863ಕ್ಕೇರಿಕೆಯಾಗಿದೆ ಎಂದು ಸಚಿವ ಸುಧಾಕರ್ ಅವರು ಮಾಹಿತಿ ನೀಡಿದ್ದಾರೆ.

ಇನ್ನು ರಾಜ್ಯದಲ್ಲಿ ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು, ಕಳೆದ 24 ಗಂಟೆಗಳಲ್ಲಿ 2071 ಮಂದಿ ಸೋಂಕಿನಿಂದ ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 29,310ಕ್ಕೇರಿಕೆಯಾಗಿದೆ. ಸದ್ಯ 49,931 ಸಕ್ರಿಯ ಪ್ರಕರಣಗಳಿದ್ದು, 640 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ 18046 ಕ್ಷಿಪ್ರ ಆಂಟಿಜೆನ್ ಪರೀಕ್ಷೆ ನಡೆಸಲಾಗಿದೆ. ಬುಧವಾರ 6107 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ.

ಬೆಂಗಳೂರು ನಗರದಲ್ಲಿ 22017, ರಾಯಚೂರಿನಲ್ಲಿ 258, ಕಲಬುರಗಿಯಲ್ಲಿ 229, ದಕ್ಷಿಣ ಕನ್ನಡದಲ್ಲಿ 218, ಬೆಳಗಾವಿಯಲ್ಲಿ 214, ಧಾರವಾಡದಲ್ಲಿ 183, ಬಳ್ಳಾರಿಯಲ್ಲಿ 164, ಬೆಂಗಳೂರು ಗ್ರಾಮಾಂತರದಲ್ಲಿ 161, ಉಡುಪಿಯಲ್ಲಿ 160, ಮೈಸೂರಿನಲ್ಲಿ 116, ಹಾಸನದಲ್ಲಿ 108, ದಾವಣಗೆರೆಯಲ್ಲಿ 107, ಬಾಗಲಕೋಟೆಯಲ್ಲಿ 106 ಪ್ರಕರಣಗಳು ವರದಿಯಾಗಿವೆ.

ಬೀದರ್‌ನಲ್ಲಿ 94, ಉತ್ತರ ಕನ್ನಡದಲ್ಲಿ 83, ಶಿವಮೊಗ್ಗದಲ್ಲಿ 82, ಗದಗದಲ್ಲಿ 72, ಚಿಕ್ಕಬಳ್ಳಾಪುರದಲ್ಲಿ 65, ಚಿಕ್ಕಮಗಳೂರಿನಲ್ಲಿ 62, ತುಮಕೂರಿನಲ್ಲಿ 56, ಯಾದಗಿರಿಯಲ್ಲಿ 55, ಮಂಡ್ಯದಲ್ಲಿ 50, ಕೋಲಾರದಲ್ಲಿ 40, ಚಾಮರಾಜನಗರದಲ್ಲಿ 27, ರಾಮನಗರದಲ್ಲಿ 26, ಕೊಡಗಿನಲ್ಲಿ 22, ವಿಜಯಪುರದಲ್ಲಿ 20, ಹಾವೇರಿಯಲ್ಲಿ 18, ಕೊಪ್ಪಳದಲ್ಲಿ 17, ಚಿತ್ರದುರ್ಗದಲ್ಲಿ 10 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Comments are closed.