ಕರ್ನಾಟಕ

ಪೊಲೀಸರನ್ನೂ ಬಿಡದ ಕೊರೋನಾ​ – ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿರುವ ಖಾಕಿಗಳು

Pinterest LinkedIn Tumblr


ಬೆಂಗಳೂರು(ಜೂ.14): ರಾಜಧಾನಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಲ್ಲಿ ದಿನೇ ದಿನೇ ಕೊರೋನಾ ಭೀತಿ ಹೆಚ್ಚಾಗಿದೆ. ಕೋವಿಡ್​​-19 ಸಂಖ್ಯೆ ದಿನೇದಿನೇ ಜಾಸ್ತಿ ಆಗ್ತಾ ಇದ್ದು, ಅದರಲ್ಲೂ ಕೊರೋನಾ ವಾರಿಯರ್ ಆಗಿರುವ ಪೊಲೀಸರನ್ನೂ ಬಿಡ್ತಾ ಇಲ್ಲ. ಇದರಿಂದ ಮುಕ್ತವಾಗಿ ಕೆಲಸ ಮಾಡೋಕೆ ಆಗದೆ ಹಿಂದೇಟು ಹಾಕಿವಂತಾಗಿದೆ.

ಇದರ ಜೊತೆಗೆ ಪ್ರತಿನಿತ್ಯ ಠಾಣೆಯಲ್ಲಿ 5-10 ಜನ ಪೊಲೀಸರು ರಜೆಗಾಗಿ ಮನವಿ ಮಾಡ್ತಾ ಇದ್ದಾರೆ. ಮನೆಯಲ್ಲಿ‌ ಚಿಕ್ಕ‌ ಮಕ್ಕಳಿದ್ದಾರೆ ಭಯ ಆಗ್ತಿದೆ, ರಜೆ‌ ಕೊಡಿ ಸಾರ್ ಎಂದು ಲೀವ್ ಲೆಟರ್​​ಗಳನ್ನು ಆಯಾ ಠಾಣೆಯ ಇನ್ಸ್​ಸ್ಪೆಕ್ಟರ್​​ಗಳಿಗೆ ಕೊಡುತ್ತಾ ಇದ್ದಾರೆ‌. ಈ ವೇಳೆ ವೀಕ್ ಆಫ್​​ ಹಾಗೂ ಮೆಡಿಕಲ್ ಎಮರ್ಜೆನ್ಸಿ ಇದ್ರೆ ಮಾತ್ರ ರಜೆ ಅಂತ ಇನ್ಸ್​ಪೆಕ್ಟರ್ ಗಳು ಸ್ಟ್ರಿಕ್ಟ್ ಆಗಿ ಹೇಳ್ತಾ ಇದ್ದಾರೆ.

ಇನ್ನು, ಒಬ್ಬೊಬ್ಬ ಕಾನ್ಸ್​ಟೇಬಲ್​​ ಸುಮಾರು 10-15 ದಿನಗಳ ರಜೆ ಕೊಡುವಂತೆಯೂ ಮನವಿ ಮಾಡ್ತಾ ಇದ್ದಾರೆ‌. ಇದೆಲ್ಲಾ ಒಂದು ಕಡೆ ಆದರೆ ಮತ್ತೊಂದು ಕಡೆ ಕೇಸ್ ಸಂಬಂಧ ಆರೋಪಿಯನ್ನು ಹಿಡಿಯೋಕೂ ಹಿಂದೇಟು ಹಾಕ್ತಾ ಇದ್ದಾರೆ ಪೊಲೀಸರು. ಯಾಕಂದ್ರೆ ನಗರದಲ್ಲಿ ಠಾಣೆಗೆ ಕರೆತಂದ ಆರೋಪಿಗಳಲ್ಲಿ ಪಾಸಿಟಿವ್ ಬರುತ್ತಿದೆ, ಜಯನಗರ, ಹೆಚ್​ಎಸ್​ಆರ್​​ ಲೇಔಟ್, ಸಿಸಿಬಿಯಲ್ಲಿಯೂ ಆರೋಪಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ಇವರು ಕಳ್ಳರನ್ನು ಹಿಡಿಯೋಕೂ ಹಿಂದೇಟು ಹಾಕ್ತಾ ಇದ್ದಾರೆ.

ಕೊರೋನಾ‌ ಆರಂಭದಲ್ಲಿ ಶೇ.33ರಷ್ಟು ಸಿಬ್ಬಂದಿಗೆ ಮನೆಯಲ್ಲಿ ಇರುವಂತೆ ಸೂಚಿಸಿದ್ರು. ಯಾಕಂದ್ರೆ ಠಾಣೆಯಲ್ಲಿ ಇರೋ ಪೊಲೀಸರಿಗೆ ಯಾರಿಗಾದ್ರೂ ಪಾಸಿಟಿವ್ ಬಂದ್ರೆ ಬ್ಯಾಕಪ್​​ಗೆ ಅಂತ ಇರಿಸಿದ್ರು. ಆದರೀಗ, ಅವರನ್ನು ಸಹ ಪ್ರತಿನಿತ್ಯ ಕೆಲಸಕ್ಕೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

Comments are closed.