ಬೆಂಗಳೂರು (ಜೂ. 20): ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮುಂದುವರೆದಿದೆ. ಇಂದು(ಬುಧವಾರ) 267 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 388 ಕೊರೋನಾ ಕೇಸ್ಗಳು ದಾಖಲಾಗಿದ್ದವು. ಇಂದು 267 ಕೊರೋನಾ ಪ್ರಕರಣಗಳು ಪತ್ತೆಯಾಗುವ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ 4,063ಕ್ಕೆ ಏರಿಕೆಯಾಗಿದೆ. ಇಂದು ದಾವಣಗೆರೆಯ 80 ವರ್ಷದ ಕೊರೋನಾ ರೋಗಿಯ ಸಾವಿನ ಪ್ರಕರಣ ವರದಿಯಾಗುವ ಮೂಲಕ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.
ದಾವಣಗೆರೆಯ 80 ವರ್ಷದ ಮಹಿಳೆ ಮೇ 28ರಂದು ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಮೇ 29ರಂದು ಅವರನ್ನು ಆಸ್ಪತ್ರೆಗೆ ಕರೆತರುವ ವೇಳೆ ಸಾವನ್ನಪ್ಪಿದ್ದರು. ಇಂದು ಆಕೆಯ ವೈದ್ಯಕೀಯ ವರದಿ ಬಂದಿದ್ದು, ಕೊರೋನಾ ಇದ್ದಿದ್ದು ಖಚಿತವಾಗಿದೆ. ಇಂದು 11 ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಒಟ್ಟಾರೆ 1,514 ರೋಗಿಗಳು ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ.
ಇಂದು ಕಲಬುರ್ಗಿಯಲ್ಲಿ 105 ಕೊರೋನಾ ಕೇಸ್ಗಳು ಪತ್ತೆಯಾಗಿವೆ. ಉಡುಪಿಯಲ್ಲಿ 62, ಬೆಂಗಳೂರಿನಲ್ಲಿ 20, ರಾಯಚೂರು- 35, ಮಂಡ್ಯ- 13, ಯಾದಗಿರಿ- 9, ಹಾಸನ- 1, ದಾವಣಗೆರೆ-3, ವಿಜಯಪುರ- 6, ದಕ್ಷಿಣ ಕನ್ನಡ-2, ಮೈಸೂರು- 2, ಬಾಗಲಕೋಟೆ- 2, ಶಿವಮೊಗ್ಗ- 2, ಬಳ್ಳಾರಿ- 1, ಧಾರವಾಡ- 1, ಕೋಲಾರ- 2, ಬೆಂಗಳೂರು ಗ್ರಾಮಾಂತರ- 1 ಕೇಸ್ಗಳು ಪತ್ತೆಯಾಗಿವೆ. ಇಂದು ಕೂಡ ಕೊರೋನಾ ಸೋಂಕಿತರ ಪೈಕಿ ಶೇ. 80ರಷ್ಟು ಮಹಾರಾಷ್ಟ್ರದಿಂದ ಬಂದವರೇ ಇದ್ದಾರೆ.
Comments are closed.